ಇಬ್ಬರ ಗೊಂದಲದಲ್ಲಿ ರಸ್ತೆ ಗುಂಡಿಯಾಯಿತು !

ಕೊಡಗು-ಹಾಸನ ಗಡಿ ಭಾಗದಲ್ಲಿರುವ ನಿಲುವಾಗಿಲು ಗ್ರಾಮದ ಜನತೆಗೆ ಅಭಿವೃದ್ಧಿಯೆಂಬುದು ಕೈಗೆ ನಿಲುಕದ ನಕ್ಷತ್ರದಂತಾಗಿದೆ. ಕನಿಷ್ಠ ಮೂಲ ಸೌಲಭ್ಯಗಳಿಂದ ವಂಚಿತ ವಾಗಿರುವ ಇಲ್ಲಿನ ಜನರ ಬದುಕು ಶೋಚನೀಯ.
ಎರಡು ಜಿಲ್ಲೆಗಳನ್ನು ಬೆಸೆಯುವ ಈ ಗ್ರಾಮ ಸಾಕಷ್ಟು ಅಭಿವೃದ್ಧಿ ಕಾಣಬೇಕಾಗಿತ್ತು. ಆದರೆ ಗಡಿ ಭಾಗದಲ್ಲಿ ಉಳಿದುಕೊಂಡಿದ್ದೇ ಶಾಪವಾಗಿ ಪರಿಣಮಿಸಿದೆ. ಕೊಡ್ಲಿ ಪೇಟೆ, ಬೆಸೂರು, ನಿಲುವಾಗಿಲು ಮೂಲಕ ಹಾಸನದ ಮಲ್ಲಿಪಟ್ಟಣಕ್ಕೆ ತೆರಳುವ ರಾಜ್ಯ ಹೆದ್ದಾರಿಯು ಜನಪ್ರತಿ ನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ರಸ್ತೆಯ ತುಂಬ ಹೊಂಡಗಳದ್ದೇ ಕಾರುಬಾರು. ಬೈಕ್‌ಗಳು ಸಂಚರಿಸುವಷ್ಟು ರಸ್ತೆ ಮಾತ್ರ ಉಳಿದುಕೊಂಡಿದ್ದು, ಉಳಿದ ಭಾಗದ ರಸ್ತೆಯನ್ನು ಗುಂಡಿ ನುಂಗಿ ಹಾಕಿದೆ. ರಸ್ತೆ ಇಷ್ಟೊಂದು ಶೋಚನೀಯ ಸ್ಥಿತಿಗೆ ತಲುಪಿದರೂ ಅಭಿವೃದ್ಧಿ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನೂ ಭರವಸೆ ನೀಡುತ್ತಲೇ ಕಾಲ ಕಳೆಯುತ್ತಿದ್ದಾರೆ. ಈ ರಸ್ತೆಯಲ್ಲಿ ಸಣ್ಣಪುಟ್ಟ ವಾಹನಗಳು ಸಂಚರಿಸಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ