ಸಾರಿ, ಎಡವಿದ್ದೇವೆ; ಭಾಗ-೨ರಲ್ಲಿ ಏಳುತ್ತೇವೆ

*ವಿಕ ಸುದ್ದಿಲೋಕ ಮೈಸೂರು
ನಿಜ, ಯೋಜನೆ ರೂಪಿಸುವ ಸಂದರ್ಭದಲ್ಲಿಯೇ ಎಡವಿದ್ದೇವೆ. ಭವಿಷ್ಯದ ನಗರ ಕಟ್ಟುವ ಎಂಜಿನಿಯರ್‌ಗಳ ಕೊರತೆ ನಮಗಿತ್ತು. ನಾಲ್ಕು ವರ್ಷಗಳ ಹಿಂದೆ ಕಾಮಗಾರಿ ಕುರಿತು ಸರಿಯಾದ `ವಿಸ್ತೃತ ಯೋಜನಾ ವರದಿ(ಡಿಪಿಆರ್)' ತಯಾರಿಸಿದ್ದರೆ, ಈ ಹೊತ್ತು ಇಷ್ಟೊಂದು ಲೋಪ ದೋಷಗಳು ಆಗುತ್ತಿರಲಿಲ್ಲ !
ಹತ್ತು ದಿನಗಳ ಕಾಲ ವಿಜಯ ಕರ್ನಾಟಕ ನಡೆಸಿದ `ನಮ್ಮ ನರ್ಮ್ - ವಿಕ ರಿಯಾಲಿಟಿ ಚೆಕ್' ಗ್ರಹಿಸಿದ ರಿಯಲ್ ಸಂಗತಿಗಳನ್ನು ನರ್ಮ್‌ನ ನೋಡಲ್ ಏಜೆನ್ಸಿ ಮೈಸೂರು ಮಹಾನಗರ ಪಾಲಿಕೆ ಒಪ್ಪಿಕೊಂಡಿತು. ಆದರೆ, ಇದಕ್ಕೆ ವ್ಯವಸ್ಥೆಯತ್ತ ಬೆರಳು ಮಾಡಿತು.
ವಿಕ ಅಭಿಯಾನದ ಅಂಗವಾಗಿ ಶನಿವಾರ ವಿಕ ಕಚೇರಿ ಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎ. ರಾಮದಾಸ್, ಸಂಸದ ಅಡಗೂರು ಎಚ್. ವಿಶ್ವನಾಥ್, ನರ್ಮ್ ವಿಶೇಷಾಧಿಕಾರಿಯೂ ಆದ ಜಿಲ್ಲಾಧಿಕಾರಿ ಹರ್ಷಗುಪ್ತ, ಪಾಲಿಕೆ ಆಯುಕ್ತ ಕೆ. ಎಸ್. ರಾಯ್ಕರ್, ಎಸಿಐಸಿಎಂನ ಎಂ. ಲಕ್ಷ್ಮಣ್, ಮೈಸೂರು ಗ್ರಾಹಕರ ಪರಿಷತ್‌ನ ಬಾಪು ಸತ್ಯನಾರಾಯಣ್ ಭಾಗವಹಿಸಿದ್ದರು. ಆಗಿರುವ ದೋಷಗಳನ್ನು ಸಚಿವರು, ಅಧಿಕಾರಿಗಳು ಪ್ರಾಮಾಣಿಕ ವಾಗಿಯೇ ಒಪ್ಪಿಕೊಂಡರು. ಸಂಸದರು, ನಾಗರಿಕ ಪ್ರತಿನಿಧಿಗಳು ಎತ್ತಿದ ಕೆಲವು ಆಕ್ಷೇಪ, ತಕರಾರುಗಳಿಗೂ ತಲೆದೂಗಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ