ಆಗಿದ್ದು ಆಯಿತು ಮುಂದಿನದು ನೋಡೋಣ...

*ವಿಕ ಸುದ್ದಿಲೋಕ ಮೈಸೂರು
ಇಂತಹ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ!
ಮೈಸೂರಿನಲ್ಲಿ ಜೆಎನ್-ನರ್ಮ್ ಯೋಜನೆ ಅನುಷ್ಠಾನ ಬಗ್ಗೆ ವಿಜಯಕರ್ನಾಟಕ ರಿಯಾಲಿಟಿ ಚೆಕ್ ಅಭಿಯಾನಕ್ಕೆ  ನಾಗರಿಕರು ಬೆನ್ನು ತಟ್ಟಿದರು. ಪತ್ರಿಕೆ ಇಂತಹ ಕೆಲಸ ಕೈಗೆತ್ತಿಕೊಂಡಿದ್ದು  ಸುತ್ಯರ್ಹ ಎಂದು ಸ್ವಯಂಸೇವಾ ಸಂಸ್ಥೆಗಳು ಅಭಿನಂದಿಸಿದವು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎ.ರಾಮದಾಸ್, ಸಂಸದ ಅಡಗೂರು ಎಚ್. ವಿಶ್ವನಾಥ್ ವಿಕ ಕಾರ್ಯವನ್ನು ಬಹಿರಂಗವಾಗಿಯೇ  ಶ್ಲಾಘಿಸಿದರು.
ನರ್ಮ್ ಯೋಜನೆಯ ಅನುಷ್ಠಾನದ  ರಿಯಾಲಿಟಿ ಚೆಕ್‌ನಲ್ಲಿ ಕಂಡುಕೊಂಡಿದ್ದನ್ನು  ಪತ್ರಿಕೆ ವರದಿ ಮಾಡುತ್ತಾ ಹೋಯಿತು. ಹತ್ತು ದಿನಗಳ ಅಭಿಯಾನ ಅಧಿಕಾರಿ ವಲಯದಲ್ಲಿ ಮಿಂಚಿನ ಸಂಚಾರಕ್ಕೂ ಕಾರಣವಾಯಿತು. ವಿಶ್ವನಾಥ್ ವಿಕ ವರದಿಯನ್ನು ಕೇಂದ್ರ ಸರಕಾರದ ಗಮನಕ್ಕೂ ತಂದರು. ರಾಜ್ಯ ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್ ೧೩ ಯೋಜನೆಗಳಲ್ಲಿ  ೫ ಯೋಜನೆ ಗಳ ಕಾರ್ಯ ವಿಳಂಬವಾಗಿದೆ ಎಂಬುದನ್ನು ಒಪ್ಪಿಕೊಂಡರು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ