ಅರಣ್ಯ ಸಚಿವರ ಜಿಲ್ಲೆಯಲ್ಲೇ ಸೌದೆ ದಂಧೆ

*ನವೀನ್‌ಕುಮಾರ್ ಪಿರಿಯಾಪಟ್ಟಣ
ತಂಬಾಕು ಬೆಳೆಗಾರರಿಗೆ ಸಿಗದ ಸೌದೆ ಹಣವಂತರಿಗೆ ಲಭ್ಯ. ರೈತರಿಗೆ ಮಾತ್ರ ಹೊರೆ... ಇದು ಅರಣ್ಯ ಸಚಿವರ `ಪ್ರೀತಿಯ' ತಾಲೂಕು ಪಿರಿಯಾಪಟ್ಟಣದಲ್ಲಿ ಸದ್ದಿಲ್ಲದೆ ನಡೆದಿರುವ ವ್ಯವಹಾರ.
ಉರುವಲು (ಸೌದೆ) ಮರಗಳ ಮಾರಾಟದಲ್ಲಿ ಕಮಿಷನ್ ಆಸೆಯಿಂದ ರೈತರನ್ನು ವಂಚಿಸಲಾಗುತ್ತಿದೆ. ಅರಣ್ಯ ಇಲಾಖೆಯಿಂದ ತಾಲೂಕಿನ ನೆಡುತೋಪು ಗಳಲ್ಲಿ ಬೆಳೆಸಲಾದ ನೀಲಗಿರಿ ಮತ್ತು ಹರ್ಕ್ಯುಲೆಸ್ ಮರಗಳ ನಾಟಾಗಳನ್ನು ಇಲಾಖೆ ಅಂಗಸಂಸ್ಥೆಯಾದ  ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ವತಿಯಿಂದ ಕಡಿದು ಮಾರಾಟ ಮಾಡಲಾಗುತ್ತಿದೆ.
ಉರುವಲು ಸೌದೆಗಳನ್ನಾಗಿ ನಾಟಾ ರೂಪದಲ್ಲಿ ಸಾಗಿಸಿ ಡಿಪೋಗಳಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸ ಲಾಗಿದೆ. ತಾಲೂಕಿನಲ್ಲಿ ತಂಬಾಕು ಬೆಳೆ ಹೆಚ್ಚಾಗಿದ್ದು ಪ್ರತಿ ವರ್ಷ ನೆಡುತೋಪುಗಳಿಂದ ಬರುವ ಸೌದೆಗಳನ್ನು  ಡಿಪೋಗಳಲ್ಲಿ ಮಾರಾಟ ಮಾಡಲಾಗು ತ್ತಿತ್ತು. ಇದರಿಂದ ರೈತರು ಹಾಗೂ ಮನೆಗಳಲ್ಲಿ ಸೌದೆ ಬಳಸುವವರಿಗೆ ಅನುಕೂಲವಾಗುತ್ತಿತ್ತು. ಈಗ ಹೊರಗಿನವರಿಗೆ ಮಾರಾಟ ಮಾಡಿ ರೈತರನ್ನು ವಂಚಿಸಲಾಗುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ