ಯುನೆಸ್ಕೊ ಪಟ್ಟಿ: ರಾಜ್ಯದ ದ್ವಂದ್ವ ನೀತಿ

ಪಿ.ಓಂಕಾರ್ ಮೈಸೂರು
ಇದು ರಾಜ್ಯ ಸರಕಾರದ ದ್ವಂದ್ವ ನಿಲುವು. ಒಂದೆಡೆ ಪಶ್ಚಿಮಘಟ್ಟ  ಶ್ರೇಣಿಯ ೧೦ ತಾಣಗಳನ್ನು `ವಿಶ್ವ ಪರಂಪರೆ' ಪಟ್ಟಿಗೆ ಸೇರಿಸುವ  ಪ್ರಸ್ತಾಪಕ್ಕೆ ವಿರೋಧ. ಮತ್ತೊಂದೆಡೆ  ದಸರೆ ಸೇರಿ ೬ ಸಾಂಸ್ಕೃತಿಕ ಸಂಗತಿಗಳನ್ನು ಅದೇ ಯುನೆಸ್ಕೋದ `ಅಮೂರ್ತ ಸಾಂಸ್ಕೃತಿಕ ಪರಂಪರೆ 'ಪಟ್ಟಿಗೆ ಸೇರಿಸಬೇಕೆಂಬ ಕೋರಿಕೆ.
ಮೈಸೂರು ದಸರಾ, ಕರಾವಳಿಯ ಯಕ್ಷಗಾನ, ಶ್ರವಣ ಬೆಳಗೊಳದ ಮಹಾಮಸ್ತಕಾಭಿಷೇಕ, ಕೊಡವ  ಸಂಸ್ಕೃತಿ, ಬಿಳಿಗಿರಿರಂಗನ ಬೆಟ್ಟದ ಸೋಲಿಗ ಪರಂಪರೆ ಮತ್ತು ತೊಗಲು ಬೊಂಬೆ ಕಲೆಯನ್ನು `ಅಮೂರ್ತ ಸಾಂಸ್ಕೃತಿಕ ಪರಂಪರೆ 'ಪಟ್ಟಿಗೆ ಸೇರಿ ಸಲು ಶಿಫಾರಸು ಮಾಡುವಂತೆ ಕೋರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ  ೨೦೦೯ ಜುಲೈ ೨೯ರಂದು ಪ್ರಸ್ತಾವನೆ ಸಲ್ಲಿಸಿ ಕಾಯುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ