ಹೊತ್ತಲ್ಲದ ಹೊತ್ತಲ್ಲಿ ಜಂಬೂ ಸವಾರಿ...

ಕುಂದೂರು ಉಮೇಶಭಟ್ಟ ಮೈಸೂರು
ಏಷ್ಯಾದ ಎಲಿಫೆಂಟ್ ಕಾರಿಡಾರ್‌ನಲ್ಲೇ ಕಾರ್‍ಯರೂಪಕ್ಕೆ ಬರಲಿಲ್ಲ ಕಾಡಾನೆ ಹಾವಳಿ ತಡೆ ಯೋಜನೆ !
ಮೈಸೂರು ಹಾಗೂ ನೆರೆ ಹೊರೆಯ ಅರಣ್ಯ ಪ್ರದೇಶದಲ್ಲಿ ಮಿತಿ ಮೀರಿರುವ ವನ್ಯಜೀವಿ-ಮನುಷ್ಯನ ನಡುವಿನ ಸಂಘರ್ಷ ತಗ್ಗಿಸಲು ರೂಪಿಸಿದ ಯೋಜನೆ ಬರೀ ಕಾಗದದ ಮೇಲೆ ಉಳಿದುಕೊಂಡಿದೆ.
ಈ ಕಾರಣದಿಂದಲೇ ಅತಿ ಹೆಚ್ಚು ಆನೆ ಹೊಂದಿರುವ ಭಾಗದಲ್ಲಿ ಸಮನ್ವಯ ಕಾಪಾಡುವ ಕೆಲಸವಾಗಿಲ್ಲ. ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಯಾಗಿದ್ದಾಗ  ರೂಪಿಸಿದ್ದ ಸುಮಾರು ೧೧೫ ಕೋಟಿ ರೂ.ಗಳ ಯೋಜನೆ ಜಾರಿಗೆ ಬರಲಿಲ್ಲ. ಅವರೇ ಹೇಳಿ ಅದನ್ನು ಮರೆತರೆ, ನಂತರ ಬಂದ ಸರಕಾರಗಳು ಬರೀ ಬಾಯಿ ಮಾತಿನ ಯೋಜನೆ ಪ್ರಕಟಿಸಿದ್ದಾಯಿತು. ಇದರಿಂದ ಈ ಭಾಗದ ಜನ ವನ್ಯಜೀವಿ ಗಳೊಂದಿಗೆ ಸಂಘರ್ಷ ಮಾಡಿಕೊಳ್ಳುತ್ತಲೇ ಬದುಕುವ ಸ್ಥಿತಿ. ಇದರ ಮುಂದುವರೆದ ಭಾಗವೇ ಮೈಸೂರು ಹೃದಯ ಭಾಗಕ್ಕೆ ಲಗ್ಗೆ ಇಟ್ಟ ಕಾಡಾನೆಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ