ಸುಪಾರಿ ಕುತಂತ್ರ: ಕಂದಾಯ ಅರಣ್ಯ ನಾಶ

*ವಿಕ ವಿಶೇಷ ಚಾಮರಾಜನಗರ
ಸುಪಾರಿ ಹಂತಕರಿಗೆ ಮನುಷ್ಯರಷ್ಟೇ ಬಲಿಯೇ? ಹಾಗೇನಿಲ್ಲ. ದಟ್ಟ  ಅರಣ್ಯದ ಸಾವಿರಕ್ಕೂ ಹೆಚ್ಚು ಮರಗಳೂ ಜೀವತೆತ್ತಿವೆ ಎಂಬುದು ಅಚ್ಚರಿಯಾದರೂ ಸತ್ಯ. ಸ್ವಾರ್ಥ ಸಾಧನೆಗಾಗಿ ಸುಪಾರಿ ನೀಡಿದವ ಒಂದು ಕಾಲದಲ್ಲಿ  ದೇಶ ಕಾದ ಯೋಧ (?). 
ಬಂಡೀಪುರ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಯೋಜನೆ ವ್ಯಾಪ್ತಿಯ ಸಮೀಪದ ಅರಣ್ಯ ಕಂದಾಯ ಭೂಮಿಯಲ್ಲಿ ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಲಾಗಿದೆ. ಇಲ್ಲಿ ಮರ ಕಡಿದಿರುವುದು ಹಣದಾಸೆಗಾಗಿ ಅಲ್ಲ , ಭೂಮಿ ಪಡೆಯುವುದಕ್ಕಾಗಿ !
ಈ ಪ್ರದೇಶದಲ್ಲಿ ಐದೂವರೆ ಎಕರೆ ಭೂಮಿ ಪಡೆಯಲು ಕಾಡು ಜಾತಿಯ ಸಾವಿರಕ್ಕೂ ಹೆಚ್ಚು ಮರಗಳನ್ನು ಹನನ ಮಾಡಲಾಗಿದೆ. ವಿಪರ್ಯಾಸವೆಂದರೆ ಇಷ್ಟು ಪ್ರಮಾಣದ ಮರಗಳನ್ನು ವ್ಯವಸ್ಥಿತ ರೀತಿಯಲ್ಲಿ ಕಡಿದು ಹಾಕುತ್ತಿದ್ದರೂ ಸಂಬಂಧಪಟ್ಟವರ್‍ಯಾರೂ ಇತ್ತ ತಲೆ ಹಾಕಿರಲಿಲ್ಲ. ಪರಿಣಾಮ ದಿಂಡಿಲು (ಅನಾಗೈಸಿಸ್), ಕಕ್ಕಲು ಸೇರಿದಂತೆ ವಿವಿಧ ಜಾತಿಯ ಮರಗಳನ್ನು ಮನಸೋ ಇಚ್ಛೆ ನೆಲಕ್ಕರುಳಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ