ಛೇ! ಅಂದ್ಕೊಂಡಂಗೆ ಆಗ್ಲಿಲ್ವೆ

ಗುಣಮಟ್ಟ ಕೇಳಬೇಡಿ...
ಮೈಸೂರಿನಲ್ಲಿ ನರ್ಮ್ ಅಡಿ ಹೊರ ವರ್ತುಲ ರಸ್ತೆ ಹಾಗೂ ಅಗೆದ ರಸ್ತೆ ರಿಪೇರಿ ಕಾಮಗಾರಿಗಳು ನಡೆಯುತ್ತಿವೆ. ಇದರಲ್ಲಿ ಹೊರ ವರ್ತುಲ ರಸ್ತೆ ಕಾಮಗಾರಿ ಸ್ಥಿತಿಯಂತೂ ಅಧ್ವಾನ. ಕಾಮಗಾರಿ ಗುಣಮಟ್ಟವಂತೂ ಕೇಳಲೇಬೇಡಿ.
ಭಾರತೀಯ ರಸ್ತೆ ಕಾಂಗ್ರೆಸ್ ನಿಯಮಗಳ ಪ್ರಕಾರ ರಸ್ತೆ ನಿರ್ಮಾಣವಾಗಬೇಕು. ಆರು ಪಥದ ರಸ್ತೆಗೆ ಅಕ್ಕಪಕ್ಕದಲ್ಲಿ ಜಾಗ ಬಿಡಬೇಕು. ಜತೆಗೆ ರಸ್ತೆ ಗಟ್ಟಿತನಕ್ಕೂ ಆದ್ಯತೆ ನೀಡಬೇಕು. ಪಾದಚಾರಿ ರಸ್ತೆ ನಿರ್ಮಿಸಬೇಕು. ಕೆಲವು ಕಡೆ ಕಾಮಗಾರಿ ಮುಗಿದಿರುವುದರಿಂದ ಬೀದಿ ದೀಪ ಬರ ಬೇಕಾಗಿತ್ತು. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ.
ಇಡೀ ರಸ್ತೆಯುದ್ದಕ್ಕೂ ಗುಣಮಟ್ಟದ ಕೆಲಸ ನಡೆಯು ತ್ತಿದೆ ಎನ್ನಿಸುತ್ತಿಲ್ಲ.  ವೆಟ್ ಬೀಮ್, ವೆಟ್ ಮಿಕ್ಸ್ ಬಳಕೆ ಮಾಡಬೇಕು. ರಸ್ತೆಗೆ ಬಳಸುವ ಮಣ್ಣು, ಟಾರಿನ ಪರೀಕ್ಷೆ ಯಾಗಬೇಕು. ಅಲ್ಲಲ್ಲಿ ಕಿರು ಪರೀಕ್ಷಾರ್ಥ ಪ್ರಯೋ ಗಾಲಯಗಳನ್ನು ಸ್ಥಾಪಿಸಿಕೊಳ್ಳುವುದು ಸೂಕ್ತ. ಈಗಿನ್ನೂ ಕೆಲಸ ಶುರುವಾಗಿರುವುದರಿಂದ ಪ್ರಯೋಗಾಲಯ ಗಳನ್ನು ಸ್ಥಾಪಿಸಬೇಕು. ಅದೇ ರೀತಿ ರಸ್ತೆಯ ಸೇತುವೆಗಳ ನಿರ್ಮಾಣ ಬಹಳಷ್ಟು ವಿಳಂಬವಾಗಿರುವುದು ಕಂಡು ಬರುತ್ತದೆ. ರಸ್ತೆಯುದ್ದಕ್ಕೂ ಆಳದ ಚರಂಡಿ ನಿರ್ಮಿಸಲಾಗಿದೆ. ಇದು ಯಾಕೆ ಎನ್ನುವುದು ಗೊತ್ತಾಗಲಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ