ಆಣೆ, ಪ್ರಮಾಣ ಕಪ್ಪಡಿಯಲ್ಲೂ ನಡೆಯುತ್ತವೆ

ಕುಂದೂರು ಉಮೇಶಭಟ್ಟ  ಮೈಸೂರು
ಧರ್ಮಸ್ಥಳವೀಗ ಯಡಿಯೂರಪ್ಪ-ಕುಮಾರಸ್ವಾಮಿ ಅವರ ರಾಜಕೀಯ ಜಿದ್ದಾಜಿದ್ದಿನ ಆಣೆ ಪ್ರಮಾಣದ ಕೇಂದ್ರಬಿಂದು. ಇದೇ ರೀತಿ ಮೈಸೂರು ಭಾಗದ ರಾಜಕಾರಣಿಗಳ ಆಣೆ ಪ್ರಮಾಣಗಳಿಗೂ ವೇದಿಕೆ ಯಾಗುವ ಸ್ಥಳವೊಂದಿದೆ. ಅದು ಕಪ್ಪಡಿ ಕ್ಷೇತ್ರ.
ಜಿಲ್ಲೆಯ ಕೃಷ್ಣರಾಜನಗರ ಪಟ್ಟಣದಿಂದ ೧೦ ಕಿ.ಮೀ.ದೂರದಲ್ಲಿರುವ ಕಪ್ಪಡಿ ಕಾವೇರಿ ನದಿ ತಟದ ಕ್ಷೇತ್ರ. ಸತ್ಯ ಮಾಡಲು ಕಪ್ಪಡಿಗೆ ಬನ್ನಿ ಎನ್ನುವುದು ಇಲ್ಲಿನ ಜನರಲ್ಲಿ ಸಾಮಾನ್ಯ ಮಾತು. ಮೈಸೂರು ಭಾಗದ ಪ್ರಮುಖ ರಾಜಕಾರಣಿಗಳಲ್ಲೂ ಆರೋಪ-ಪ್ರತ್ಯಾರೋಪಗಳಾದಾಗ ಅವರ ಚಿತ್ತ ಹರಿಯುವುದು ಕಪ್ಪಡಿಯತ್ತಲೇ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ