ಮೈಸೂರು ಜೈವಿಕ ಗಡಿಯಾರ ಏರುಪೇರು !

ಚೀ.ಜ.ರಾಜೀವ ಮೈಸೂರು
ನಿಮಗೆ ಗೊತ್ತೆ? ಮೈಸೂರಿನ ಸಾವಿ ರಾರು ಮುಂಜಾನೆ `ವಾಯು ವಿಹಾರಿ' ಗಳ ಪಾಲಿಗೆ  ವಾರದಿಂದ ಬೆಳಕು ಹರಿಯುವುದು ತಡವಾಗುತ್ತಿದೆ !
ಸೂರ್ಯೋದಯಕ್ಕೆ ಮುನ್ನವೇ ಹಾಸಿಗೆ ಯಿಂದ ಎದ್ದು, ಶೂ ಧರಿಸಿ ಕೊಂಡು ರಸ್ತೆಗಿಳಿ ಯುತ್ತಿದ್ದ  ಬಹುತೇಕ ಮಂದಿ ಈಗ ಸೂರ್ಯನ ಆಗಮನ ವನ್ನು  ಖಚಿತ ಪಡಿಸಿಕೊಂಡೇ ಹೊಸ್ತಿಲು ದಾಟುತ್ತಿದ್ದಾರೆ.
ಏನಿದರ ಮಹಿಮೆ ಎಂಬ ಕುತೂಹಲವನ್ನು ಬೆನ್ನಟ್ಟಿ ಹೋದರೆ ದೊರೆಯುವ ಉತ್ತರ ಆನೆಗಳ ಭೀತಿ (ಪ್ಯಾಕಿಡರ್ಮೊ ಫೋಬಿಯಾ) ಮೈಸೂರಿನ `ನಡಿಗೆ ವೀರ, ವನಿತೆ'ರನ್ನು ಆವರಿಸಿದೆ. ಬೆಳ್ಳಂಬೆಳಗ್ಗೆ  ಎರಡು ಆನೆಗಳು ಮೈಸೂರಿಗೆ ನುಗ್ಗಿ, ಒಬ್ಬನನ್ನು ಹೊಸಕಿ ಹಾಕಿ ಹೋದ ಘಟನೆಯಿಂದ ಬೆಚ್ಚಿ ಬಿದ್ದಿರುವ ಜನತೆ, ನಸುಕಿನ ಸಹವಾಸವನ್ನೇ ತೊರೆದಿದ್ದಾರೆ. ಆನೆಗಳ ಬಳಿಕ ಜೆ.ಪಿ. ನಗರದ ಭಾಗಕ್ಕೆ ಚಿರತೆ ಯೊಂದು `ಹಾಗೆ  ಸುಮ್ಮನೆ'ಬಂದು ಹೋಗಿದೆ. ಇದೆಲ್ಲದರ ಪರಿಣಾಮ ಮೈಸೂರಿನ ಮುಂಜಾನೆಯ ಚಿತ್ರಣವೇ ಬದಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ