ಚಿರತೆ ಕಾಡಿಗೆ, ಇನ್ನು ನಿಶ್ಚಿಂತೆ

ವಿಕ ಸುದ್ದಿಲೋಕ ಎಚ್.ಡಿ.ಕೋಟೆ
ಜನ-ಜಾನುವಾರುಗಳಲ್ಲಿ ಭಯ ಹುಟ್ಟಿಸಿದ್ದ ಗಂಡು ಚಿರತೆ(೯) ಕೃಷ್ಣಾಪುರ ಗ್ರಾಮದ ಬಳಿಯ ಮಾಜಿ ಸಚಿವ ಎಂ ಶಿವಣ್ಣನವರ ಜಮೀನಿನಲ್ಲಿ ಬೋನಿಗೆ ಬಿದ್ದಿದೆ.
ಬೆಳಗಿನ ಜಾವ ೩ ಗಂಟೆಯಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಬೆಳಗ್ಗೆ ಚಿರತೆ ಬೋನಿಗೆ ಬಿದ್ದಿರುವ ಮಾಹಿತಿ ದೊರೆಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೋನಿ ನಲ್ಲಿದ್ದ ಚಿರತೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಡಿ.ಬಿ. ಕುಪ್ಪೆ ವನ್ಯ ಜೀವಿ ವಲಯದ ಹಳೇ ಕಾಕನಕೋಟೆ ಗಸ್ತಿಗೆ ಒಯ್ದು ಬಿಟ್ಟರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ