ಸಕಾಲಕ್ಕೆ ಬರಲಿಲ್ಲ ಕೇಂದ್ರದ ಅನುದಾನ

*ಚೀ.ಜ.ರಾಜೀವ ಮೈಸೂರು
ಮುಂಗಾರು ಮಳೆ  ಶುಭಾರಂಭಗೊಂಡು, ಭರ್ಜರಿಯಾಗಿ ಸುರಿಯುವುದು  ಗ್ರಾಮೀಣ ಪ್ರದೇಶದ ಜನರಿಗೆ ಸಂತಸ ತಂದರೆ,  ಮೈಸೂರಿನಂಥ ಮಹಾ ಜನತೆಗೆ ಸಂಕಟ ತರುತ್ತದೆ !
ಹದವಾಗಿ ಎರಡು ಬಾರಿ ಮಳೆ ಬಿದ್ದರೆ ಸಾಕು ಮೈಸೂರಿನ ಹಾದಿ ಬೀದಿಗಳು ಕೆರೆ ಕೊಳ್ಳಗಳಾಗಿ ಪರಿವರ್ತನೆಯಾಗುತ್ತದೆ. ಮೂರು ವರ್ಷಗಳ ಹಿಂದೆ ಸುರಿದ ಸಾಧಾರಣ ಮುಂಗಾರಿಗೆ ಮುಂಬಯಿ, ಬೆಂಗಳೂರಿನಂಥ ಮಹಾನಗರಗಳು  ಕೊಚ್ಚಿಕೊಂಡು ಹೋಗಿದ್ದವು. ಆ ವರ್ಷ ಮೈಸೂರಿನಲ್ಲೂ ಅದೇ ಸ್ಥಿತಿ. ತಗ್ಗಿನ ಪ್ರದೇಶಗಳ ಜನರ ಪಾಡಂತೂ ಹೇಳತೀರದು. `ಯಾಕಾದರೂ ಮಳೆ ಬಿದ್ದಿತೋ,... ಶಿವಾ ಶಿವಾ...' ಎಂದು ಭಜನೆ ಮಾಡುವಂಥ ಸ್ಥಿತಿ ನಿರ್ಮಾಣವಾಗುತ್ತದೆ.
ಯಾಕೆ ಹೀಗೆ ಎಂಬ ಪ್ರಶ್ನೆಯನ್ನು ಬೆನ್ನತ್ತಿದರೆ ದೊರಕುವ ಉತ್ತರ ಒಂದೇ- ನಮ್ಮ ನಗರಗಳ ಮಳೆ ನೀರು ಚರಂಡಿ ವ್ಯವಸ್ಥೆ  ಸಂಪೂರ್ಣ ಹದಗೆಟ್ಟಿದೆ.
ಇದನ್ನು ಮನಗಂಡೇ ಕೇಂದ್ರ ಸರಕಾರ ತನ್ನ  ನರ್ಮ್ ಯೋಜನೆಯಲ್ಲಿ  ಮಳೆ ನೀರಿನ ಚರಂಡಿ ನವೀಕರಣಕ್ಕೆ ಧಾರಾಳವಾಗಿಯೇ ಅನುದಾನ ಒದಗಿಸಿದೆ. ಆದರೆ, ದೊರಕಬಹುದಾದ ಅನುದಾನವನ್ನು ಬಳಸಿಕೊಳ್ಳುವಷ್ಟು  ಶಕ್ತಿ-ಸಾಮರ್ಥ್ಯ, ಜಾಣ್ಮೆ ಕೂಡ ಮೈಸೂರು ಪಾಲಿಕೆಗೆ ಇಲ್ಲ  !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ