ಮಾದಪ್ಪ ಸನ್ನಿಧಿಯಲ್ಲಿ ಇನ್ನು ಅಭಿವೃದ್ಧಿ ಪರಿಶೆ

ಕೋಟಂಬಳ್ಳಿ ಗುರುಸ್ವಾಮಿ ಕೊಳ್ಳೇಗಾಲ
ಮಲೆ ಮಹಾದೇಶ್ವರಬೆಟ್ಟ ಹೊಸ ಸ್ವರೂಪ ಪಡೆದು ಕೊಳ್ಳುತ್ತಿದೆ. ಈ ಹಿಂದೆ ಇದ್ದ ಸಂಕೀರ್ಣ ವ್ಯವಸ್ಥೆಯನ್ನು ಹೋಗಲಾಡಿಸಿ ಸುಂದರ ರೂಪ ಕೊಡುವ ನಿಟ್ಟಿನಲ್ಲಿ ಸರಕಾರ ಮುಂದಾಗಿದೆ.
ಈಗಾಗಲೇ ೪೦೦ ಎಕರೆ ಪ್ರದೇಶವನ್ನೊಳಗೊಂಡ ಮಾಸ್ಟರ್ ಪ್ಲಾನ್ ಸಿದ್ಧವಾಗಿದೆ. ಇದಕ್ಕೆ ಹಣ ಮಿತಿ ಬೇಡ. ತಿರುಪತಿ, ತಿರುಮಲ ಮಾದರಿಯಲ್ಲಿ ಸುಂದರ, ಆಕರ್ಷಕ ಪ್ರವಾಸಿ ತಾಣವನ್ನಾಗಿ ಮಾಡಿ. ಅದಕ್ಕೆ ತಗುಲುವ ವೆಚ್ಚವನ್ನು ಸರಕಾರ ಭರಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮಲೆ ಮಹಾದೇಶ್ವರಬೆಟ್ಟದಲ್ಲಿ ಒಂದು ದಿನ ವಾಸ್ತವ್ಯ ಹೂಡಿದ್ದ ಸಿಎಂ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಹೋಗಿದ್ದಾರೆ. ೬ ತಿಂಗಳಿಗೊಮ್ಮೆ ಭೇಟಿ ನೀಡಿ ಪರಿಶೀಲಿಸುತ್ತೇನೆ  ಎಂಬ ಎಚ್ಚರಿಕೆಯನ್ನೂ ನೀಡಿ ದ್ದಾರೆ. ಹೀಗಾಗಿ ಬೆಟ್ಟದಲ್ಲಿ ಈಗ ಅಭಿವೃದ್ಧಿ ಮಂತ್ರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ