ಭಾರಿ ಮಳೆ; ಜಲಾವೃತ ಮರ ಬಿದ್ದು ಅಸ್ತವ್ಯಸ್ಥ

ವಿಕ ಸುದ್ದಿಲೋಕ ಚಾಮರಾಜನಗರ
ಚಾ.ನಗರ, ಯಳಂದೂರು ಪಟ್ಟಣ ಸೇರಿದಂತೆ ಸುತ್ತಮುತ್ತ ಬುಧವಾರ ಭಾರಿ ಸುರಿ ಸುರಿದ ಪರಿಣಾಮ ಹಲವಾರು ಪ್ರದೇಶ ಗಳು ಜಲಾವೃತಗೊಂಡಿದ್ದವು. ಕೆಲ ಕಡೆ ಮರ ಉರುಳಿ ಜನ ಸಂಚಾರ ಹಾಗೂ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಯಿತು.
ನಗರದಲ್ಲಿ ಬೆಳಗ್ಗೆಯಿಂದ ಮಳೆ ಬರುವ ಯಾವುದೇ ಮುನ್ಸೂಚನೆ ಇರಲಿಲ್ಲ. ಮಧ್ಯಾಹ್ನ ೧.೩೦ರ ಸಮಯದಲ್ಲಿ ಮಳೆ ಏಕಾಏಕಿ ಧೋ ಎಂದು ಸುರಿಯಲಾರಂಭಿ ಸಿತು. ಗಾಳಿ ಸಹಿತ ಭರ್ಜರಿ ಮಳೆ ಸುರಿಯಿತು. ಸುಮಾರು ಒಂದು ತಾಸು ಸುರಿದ ಮಳೆ ಜನಸಂಚಾರವನ್ನು ಅಸ್ತವ್ಯಸ್ತಗೊಳಿಸಿತು. ಶುರುವಿನಿಂದಲೇ ಆರ್ಭಟಿಸಿದ ಮಳೆ ನಿರಂತರ ಒಂದು ತಾಸು ಒಂದೇ ಸಮನೆ ಜೋರಾಗಿ ಸುರಿಯಿತು. ಇದರೊಂದಿಗೆ ಗಾಳಿಯೂ ಇದ್ದ ಕಾರಣ ಗಾಳಿಪುರ, ಹೌಸಿಂಗ್ ಬೋರ್ಡ್ ಕಾಲೋನಿ ಹಾಗೂ ಚೆನ್ನಿಪುರ ಮೋಳೆಯಲ್ಲಿ ಮರಗಳು ಉರುಳಿ ಬಿದ್ದವು. ಚೆನ್ನೀಪುರ ಮೋಳೆ ಬಡಾವಣೆ ಮೂಲಕ ದೊಡ್ಡ ಚರಂಡಿ ಹಾದು ಹೋಗಿದ್ದು, ದಿಢೀರ್ ಭಾರಿ ಪ್ರಮಾಣದ ನೀರು ನುಗ್ಗಿದ ಪರಿಣಾಮ ತಗ್ಗು ಪ್ರದೇಶಕ್ಕೆ ನುಗ್ಗಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ