ಜನನ ಪ್ರಮಾಣ ಕ್ಷೀಣ: ಸರಕಾರಿ ಶಾಲೆಗೆ ಕಂಟಕ

ಸರಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆಯೇ ?   ಮುಚ್ಚುವ ಪರಿಸ್ಥಿತಿಗೆ  ವಿದ್ಯಾರ್ಥಿಗಳ ಕೊರತೆಯೇ ಕಾರಣವೇ ? ಹಾಗಾದರೆ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಿಂದ ವಿಮುಖರಾಗುತ್ತಿದ್ದಾರೆಯೇ  ? ..
ಈ ಪ್ರಶ್ನೆಗಳಿಗೆ  ಒಂದೇ ಉತ್ತರ ಜನನ ಪ್ರಮಾಣ ಸಂಖ್ಯೆ ಇಳಿಮುಖವಾಗುತ್ತಿರುವುದು. ಹೀಗೊಂದು ಹೊಸ  ಸಂಗತಿಯನ್ನು ಬಯಲು ಮಾಡಿದವರು ಜಿಲ್ಲಾ  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಗೋಪಾಲ್. 
ನಗರದ ಪತ್ರಿಕಾ ಕಚೇರಿಯಲ್ಲಿ  ಶುಕ್ರವಾರ ಜಿಲ್ಲೆಯಲ್ಲೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ  `ವಿಕ ಫೋನ್ ಇನ್' ಕಾರ್ಯಕ್ರಮದಲ್ಲಿ  `ಜಿಲ್ಲಾ  ಶಾಲಾ ಚಟುವಟಿಕೆ ಮತ್ತು ಮೂಲ ಸೌಕರ್ಯ' ಕುರಿತು ಓದುಗರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ನಾನಾ ಸಮಸ್ಯೆ, ಸಂಕಟಗಳನ್ನು ತಮ್ಮ ಒಡಲಿನಿಂದ ಡಿಡಿಪಿಐ ಮಡಿಲಿಗೆ ಹಾಕಿದ ಓದುಗರು ಅವರು ನೀಡಿದ ಉತ್ತರಗಳಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ