ಸರಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆಯೇ ? ಮುಚ್ಚುವ ಪರಿಸ್ಥಿತಿಗೆ ವಿದ್ಯಾರ್ಥಿಗಳ ಕೊರತೆಯೇ ಕಾರಣವೇ ? ಹಾಗಾದರೆ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಿಂದ ವಿಮುಖರಾಗುತ್ತಿದ್ದಾರೆಯೇ ? ..
ಈ ಪ್ರಶ್ನೆಗಳಿಗೆ ಒಂದೇ ಉತ್ತರ ಜನನ ಪ್ರಮಾಣ ಸಂಖ್ಯೆ ಇಳಿಮುಖವಾಗುತ್ತಿರುವುದು. ಹೀಗೊಂದು ಹೊಸ ಸಂಗತಿಯನ್ನು ಬಯಲು ಮಾಡಿದವರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಗೋಪಾಲ್.
ನಗರದ ಪತ್ರಿಕಾ ಕಚೇರಿಯಲ್ಲಿ ಶುಕ್ರವಾರ ಜಿಲ್ಲೆಯಲ್ಲೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ `ವಿಕ ಫೋನ್ ಇನ್' ಕಾರ್ಯಕ್ರಮದಲ್ಲಿ `ಜಿಲ್ಲಾ ಶಾಲಾ ಚಟುವಟಿಕೆ ಮತ್ತು ಮೂಲ ಸೌಕರ್ಯ' ಕುರಿತು ಓದುಗರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ನಾನಾ ಸಮಸ್ಯೆ, ಸಂಕಟಗಳನ್ನು ತಮ್ಮ ಒಡಲಿನಿಂದ ಡಿಡಿಪಿಐ ಮಡಿಲಿಗೆ ಹಾಕಿದ ಓದುಗರು ಅವರು ನೀಡಿದ ಉತ್ತರಗಳಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಈ ಪ್ರಶ್ನೆಗಳಿಗೆ ಒಂದೇ ಉತ್ತರ ಜನನ ಪ್ರಮಾಣ ಸಂಖ್ಯೆ ಇಳಿಮುಖವಾಗುತ್ತಿರುವುದು. ಹೀಗೊಂದು ಹೊಸ ಸಂಗತಿಯನ್ನು ಬಯಲು ಮಾಡಿದವರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಗೋಪಾಲ್.
ನಗರದ ಪತ್ರಿಕಾ ಕಚೇರಿಯಲ್ಲಿ ಶುಕ್ರವಾರ ಜಿಲ್ಲೆಯಲ್ಲೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ `ವಿಕ ಫೋನ್ ಇನ್' ಕಾರ್ಯಕ್ರಮದಲ್ಲಿ `ಜಿಲ್ಲಾ ಶಾಲಾ ಚಟುವಟಿಕೆ ಮತ್ತು ಮೂಲ ಸೌಕರ್ಯ' ಕುರಿತು ಓದುಗರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ನಾನಾ ಸಮಸ್ಯೆ, ಸಂಕಟಗಳನ್ನು ತಮ್ಮ ಒಡಲಿನಿಂದ ಡಿಡಿಪಿಐ ಮಡಿಲಿಗೆ ಹಾಕಿದ ಓದುಗರು ಅವರು ನೀಡಿದ ಉತ್ತರಗಳಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ