ಆನೆ ಬಂತೊಂದಾನೆ, ಯಾವೂರಾನೆ ... ಮಳವಳ್ಳಿಯಾನೆ...

ಚೀ.ಜ.ರಾಜೀವ ಮೈಸೂರು
ಆನೆ ಮೈಸೂರಿಗೆ ಬಂದಿದ್ದು ಏಕೆ ?
 -ಅಯ್ಯೋ, ಅಷ್ಟು ಗೊತ್ತಾಗಲ್ವೇನ್ರಿ. ಅದಕ್ಕೆ ಕಾಡಲ್ಲಿ ಮೇವು ಇಲ್ವಂತೆ. ಅದಕ್ಕೆ ಅದು ದಾರಿ ತಪ್ಪಿ ಇಲ್ಲಿಗೆ ಬಂದಿದೆ,ಪಾಪ...!
`ಜಂಬೂ ಸವಾರಿ ನಗರಿ' ಮೈಸೂರಿನಲ್ಲಿ ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಇದೇ ಧಾಟಿಯ ಚರ್ಚೆ. ಮುಂಜಾನೆಯಿಂದ ಸೆರೆ ಸಿಕ್ಕುವವರೆಗೂ ಆನೆ ದಾಂಧಲೆ  ನೋಡುತ್ತಲೇ, ಅದರ ಹಿಂದೆ ಹಿಂಡಿನಂತೆ ಸಾಗಿದ ಕುತೂಹಲ ಭರಿತ ಜನರಿಗೆ,ಆತಂಕವಷ್ಟೇ ಇರ ಲಿಲ್ಲ.ಬಹಳಷ್ಟು ಜನರಿಗೆ `ಆನೆಯ ಭೇಟಿ' ರಂಜನೆ, ಮನರಂಜನೆ,ಮಾಹಿತಿಯನ್ನೂ  ಒದಗಿಸಿತು.ರಸ್ತೆಯ ಇಕ್ಕೆಲಗಳ ಮಹಡಿ-ಮಹಲು, ಬೇಲಿ-ಮರಗಳನೇರಿ, ನೂಕು-ನುಗ್ಗಲಾಗಿಸಿಕೊಂಡು ದಸರೆಯ ಜಂಬೂ ಸವಾರಿ ಯನ್ನು ಕಣ್ತುಂಬಿಸಿಕೊಳ್ಳುವಂತೆಯೇ, ಕಾಡಾನೆ  ಸವಾರಿ ಯನ್ನು ಮೈಸೂರಿನ ಸಾವಿರಾರು ಜನ ವೀಕ್ಷಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ