ಪ್ರಕೃತಿ ವಿಕೋಪ: ಜಿಲ್ಲಾಡಳಿತ ಸಜ್ಜು

ವಿಕ ಸುದ್ದಿಲೋಕ ಮಡಿಕೇರಿ
ಜಿಲ್ಲೆಯಲ್ಲಿ  ಹೆಚ್ಚು  ಸಮಸ್ಯೆಗಳಿಲ್ಲದಿದ್ದರೂ ಸಣ್ಣ ಪುಟ್ಟ ಸಮಸ್ಯೆಗಳೇ ಬೆಟ್ಟದಷ್ಟಾಗಿವೆ. ಬಹುತೇಕ ಕಚೇರಿಗಳಲ್ಲಿ ಯುವ ಸಿಬ್ಬಂದಿಯೇ ಹೆಚ್ಚಿದ್ದರೂ ಆಡಳಿತದಲ್ಲಿ  ಚುರುಕು ಕಾಣುತ್ತಿಲ್ಲ. ಅಧಿಕಾರಿ ವರ್ಗ ಹಾಗೂ ನೌಕರರು  ಜನ ಸಾಮಾನ್ಯರ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದರೂ ಪ್ರಕೃತಿ ವಿಕೋಪ ಎದುರಿಸಲು  ಜಿಲ್ಲಾಡಳಿತ ಸಜ್ಜಾಗಿದೆ...
ಸೋಮವಾರ   ನಗರದ ವಿಜಯ ಕರ್ನಾಟಕ  ಕಚೇರಿಯಲ್ಲಿ  ಗಂಟೆಗೂ  ಹೆಚ್ಚು ಕಾಲ ನಡೆದ `ವಿಕ ಫೋನ್ ಇನ್' ಕಾರ್ಯಕ್ರಮದಲ್ಲಿ   ಉಪ ವಿಭಾಗಾಧಿಕಾರಿ ಡಾ. ಎಂ. ಆರ್. ರವಿ  ಜಿಲ್ಲೆಯ ಜನತೆಗೆ ಹತ್ತು ಹಲವು ಭರವಸೆ ನೀಡಿದರು. ಸಾರ್ವಜನಿಕರಿಂದ ಬಂದ ಬಹುತೇಕ ಕರೆಗಳಿಗೆ ಸಾವಧಾನವಾಗಿ ಉತ್ತರಿಸಿ ಸಮಸ್ಯೆಗಳಿಗೆ ಸ್ಪಂದಿಸುವ ತಮ್ಮ ನೈಜ ಕಳಕಳಿ ತೋರಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ