ಮೈದುಂಬಿದ ಕಬಿನಿ, ಕನ್ನಂಬಾಡಿ ಅಣೆಕಟ್ಟು

ಕುಂದೂರು ಉಮೇಶಭಟ್ಟ, ಮೈಸೂರು
ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿ ಬಳಿ ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಮಾಡಿಕೊಂಡ ಅರಿಕೆ  ಈಡೇರಿದಂತಿದೆ.
ಮುಖ್ಯಮಂತ್ರಿ ಸ್ಥಾನದ ಜತೆಗೆ ತಮಿಳುನಾಡು-ಕರ್ನಾಟಕ ಸ್ನೇಹ ಹಾಗೂ ಬಾಂಧವ್ಯ ವೃದ್ಧಿಯಾಗಲಿ ಎನ್ನುವುದು ಅವರ ಕೋರಿಕೆಯಾಗಿತ್ತು. ಅದರಂತೆ ಅವರಿಗೆ ಕಳೆದ ತಿಂಗಳೇ ಮುಖ್ಯ ಮಂತ್ರಿ ಗಾದಿ ಸಿಕ್ಕಾಗಿದೆ. ಎರಡನೆಯದಾಗಿ ಉಭಯ ರಾಜ್ಯಗಳ ಸಂಕಟಕ್ಕೆ ಕಾರಣಳಾಗುವ ಕಾವೇರಿ ಈ ಬಾರಿ ಒಲಿಯುವ ಸೂಚನೆ ನೀಡಿದ್ದಾಳೆ.  ಕೆಲ ದಿನಗಳ ಹಿಂದೆಯಷ್ಟೇ ಜಯಲಲಿತಾ ಕಾವೇರಿ ಕ್ಯಾತೆ ತೆಗೆಯುವ ಸೂಚನೆ ಸಿಕ್ಕಾಗಲೇ ಪ್ರಕೃತಿ ಇದನ್ನು ತಣ್ಣಾಗಾಗಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ