ಮಧುರ ಮಂಡ್ಯದಲ್ಲಿ ತುಂಬಿ ತುಳುಕುವ ಕಸದ ತೊಟ್ಟಿ

ನವೀನ್ ಮಂಡ್ಯ
ಸ್ವಚ್ಛತೆ ವಿಷಯದಲ್ಲಿ ದೇಶದಲ್ಲಿ ೧೫ನೇ ಸ್ಥಾನ ಪಡೆದಿರುವ `ನಿರ್ಮಲ ನಗರ' ಮಂಡ್ಯದಲ್ಲಿ ನೈರ್ಮಲ್ಯಕ್ಕೆ ಪೂರಕವಾದ ಯಾವೊಂದು ಅಂಶಗಳು ಕಾಣುತ್ತಿಲ್ಲ. ನಿಜಕ್ಕೂ ಸ್ವಚ್ಛತೆ ಮರೀಚಿಕೆಯಾಗಿದೆ.
ಎಲ್ಲೆಂದರಲ್ಲಿ ಕಸ ಕಣ್ಣಿಗೆ ರಾಚುತ್ತದೆ. ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿಲ್ಲ. ಪರಿಣಾಮ ಕಸದ ತೊಟ್ಟಿಗಳು ತುಂಬಿ ತುಳುಕುತ್ತಿವೆ. ತೊಟ್ಟಿ ತುಂಬಿದ ಕಸ ರಸ್ತೆ ಮತ್ತು ಚರಂಡಿಯಲ್ಲಿ ಬಿದ್ದು ಚೆಲ್ಲಾಡುತ್ತಿದೆ.
ಕೆಲವೆಡೆ ದೊಡ್ಡ ಕಂಟೈನರ್ ಇಟ್ಟಿದ್ದರೂ ಅದನ್ನು ತುಂಬಿ ಕಸ ಹೊರ ಬರುತ್ತಿದೆ. ಚರಂಡಿ ಸೇರಿದ ಕಸ ಅಲ್ಲೇ ಕೊಳೆತು ದುರ್ನಾತ ಬೀರುತ್ತಿದೆ. ಇದರಿಂದ ಮಲಿನ ನೀರು ಚರಂಡಿ ಗಳಲ್ಲಿ ಸರಾಗವಾಗಿ ಹರಿಯುತ್ತಿಲ್ಲ. ಇದನ್ನು ತಪ್ಪಿಸುವ ಸಲುವಾಗಿ ಇತ್ತೀಚೆಗೆ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ನಿಧಿಯಿಂದ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆದರೆ ಆ ಕಾಮಗಾರಿಯ ಗುಣಮಟ್ಟವೂ ಅಷ್ಟಕ್ಕಷ್ಟೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ