ಹೊಸ ಪರಿಕಲ್ಪನೆಯೂ ಇರಲಿ, ವ್ಯವಸ್ಥೆ ಬದಲಾಗಲಿ

ವಿಕ ಸುದ್ದಿಲೋಕ ಮೈಸೂರು
ರಾಜ್ಯದ ಬಹುದೊಡ್ಡ ಸಂಪರ್ಕ ಜಾಲವಾಗಿರುವ ಕೆಎಸ್‌ಆರ್‌ಟಿಸಿಯಿಂದ ಮೈಸೂರು ನಗರ ಸಾರಿಗೆ ವಿಭಾಗದಲ್ಲಿ `ಬಸ್ ದಿನಾಚರಣೆ 'ಪರಿಕಲ್ಪನೆಗೆ ನಗರ ನಾಗರಿಕರಿಂದ ಸ್ವಾಗತ ಸಿಕ್ಕಿರುವ ಬೆನ್ನ ಹಿಂದೆಯೇ ಸಾರಿಗೆ (ಅ)ವ್ಯವಸ್ಥೆಯ ಹುಳುಕನ್ನೂ ಎತ್ತಿ ತೋರಿದ್ದಾರೆ.
ಏಳು ದಿನಗಳಿಂದ ವಿಜಯ ಕರ್ನಾಟಕ ನಡೆಸಿದ `ವಿಕ ಅಭಿಯಾನ'ಕ್ಕೆ ಸಿಕ್ಕ ಪ್ರತಿಕ್ರಿಯೆ ನಿಜಕ್ಕೂ ಅದ್ಭುತ. ಭವಿಷ್ಯದ ನೆಲೆಯಲ್ಲಿ ಒಂದು ಉತ್ತಮ ಪರಿಕ್ರಮ ವಾದಂಥ' ಬಸ್ ದಿನ ದಂಥ ಪರಿಕಲ್ಪನೆಗೆ ಜನರನ್ನು ಮುಖಾಮುಖಿಗೊಳಿಸಲೆಂದೇ ಪತ್ರಿಕೆ ಇಂಥದೊಂದು ಅಭಿಯಾನವನ್ನು ಆರಂಭಿಸಿತ್ತು. ಈ ವೇದಿಕೆಯನ್ನು ಸಮರ್ಥವಾಗಿ ಬಳಸಿದ ಸಾರ್ವ ಜನಿಕರು, ಬಸ್ ದಿನ ದ ಸಾರ್ಥಕತೆ ಬಗ್ಗೆ ಸಾಕಷ್ಟು ಸಲಹೆ ಗಳನ್ನು ಕೊಟ್ಟರಲ್ಲದೇ, ತಿಂಗಳಿಗೊಂದು ದಿನವೇಕೆ ? ದಿನವೂ ಬಸ್ ದಿನ ಆಚರಿಸಲು ಕೆಎಸ್‌ಆರ್‌ಟಿ ಸಿ ಯ ನಗರ ಸಾರಿಗೆ ವಿಭಾಗ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದರ ಬಗ್ಗೆ ಕೊಟ್ಟ ಟಿಪ್ಸ್ ಬಹಳ ಅನುಪಮವಾದುದು.
ಅಭಿಯಾನದ ಕೊನೇ ದಿನವಾದ ಸೋಮವಾರ ಸಂಜೆ ೫ ರಿಂದ ೬ ವರೆಗೆ ಸಾಕಷ್ಟು ಮಂದಿ ಸಾರ್ವಜನಿಕರು ದೂರವಾಣಿ ಕರೆ ಮಾಡಿ, `ವಿಕ ಫೋನ್-ಇನ್' ನಲ್ಲಿ ಪ್ರಶ್ನೆಗಳ ಸುರಿಮಳೆಗರೆದರು. ಸಂಸ್ಥೆಯ ಅಧಿಕಾರಿಗಳು ಸಹ ಸ್ಪಷ್ಟ ಉತ್ತರ ನೀಡಿದರು. ಒಂದರ್ಥದಲ್ಲಿ ಬಸ್ ದಿನದ ನೆಪದಲ್ಲಿ ಸಾರಿಗೆ ಸಂಸ್ಥೆ ಮತ್ತು ಜನರ ನಡುವೆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು ನಿಜ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ