ಕಳಪೆ ಕಾಮಗಾರಿ ಅವಾಂತರ, ಮಳೆ ಬಂದರೆ ಬಣ್ಣಗೇಡು

ಕೋಟಂಬಳ್ಳಿ ಗುರುಸ್ವಾಮಿ ಕೊಳ್ಳೇಗಾಲ 
ಪಟ್ಟಣದಲ್ಲಿ  ರಸ್ತೆ ಕಳೆದಿದೆ! ಹುಡುಕಿಕೊಡಿ ಎನ್ನುವುದು ಜನತೆ ಒಕ್ಕೊರಲು. ರಸ್ತೆಯನ್ನು ಕಾಲುದಾರಿ ನುಂಗಿದೆಯೋ, ಕಾಲು ದಾರಿಯಲ್ಲಿ ರಸ್ತೆ ಕಳೆದು ಹೋಗಿದೆಯೋ, ತಿಳಿಯುತ್ತಿಲ್ಲ್ಲ. ಕಾಲುದಾರಿಯನ್ನೇ ರಸ್ತೆ ಎನ್ನಬೇಕು ಅಷ್ಟರ ಮಟ್ಟಿಗೆ ಸ್ಥಿತಿ ಹೀನಾಯ. ಹಗಲಿನಲ್ಲಿ ದೀಪ ಹಿಡಿದು ಹುಡುಕಿದರೂ ಸುಸ್ಥಿತಿ ರಸ್ತೆ ಒಂದೂ ಕಂಡುಬರದು. ಕಾಲು ದಾರಿಯಂತಿರುವ ಮಾರ್ಗವನ್ನು ರಸ್ತೆ ಎನ್ನಬೇಕು.
ಇದಕ್ಕೆ ಅಪೂರ್ಣ ಕಾಮಗಾರಿಯ ಕೃಪೆ ಒಂದೆಡೆ ಇದ್ದರೆ, ಕೆಲ ರಸ್ತೆಗಳ ಕಾಮಗಾರಿ ನಡೆದಿರುವುದು ನೀಜ. ಆದರೆ, ಡಾಂಬರೀಕರಣವಾಗಿದೆ ಎನ್ನುವುದಕ್ಕೆ ಪುರಾವೆಯೇ ಸಿಗದಂತಿದೆ ಇನ್ನೊಂದೆಡೆ. ಅಲ್ಲದೇ, ಮಳೆ ಬಂದರೆ ಕಾಮಗಾರಿ ಬಣ್ಣ ಪೂರ್ಣ ಪ್ರಮಾಣದಲ್ಲಿ ಬಯಲು. ಡಾಂಬರೀಕರಣ ಮಾಡುವಾಗ ಒಂದು ರಸ್ತೆಯನ್ನು ಎರಡು ಭಾಗ ಮಾಡಿ  ಕೆಲಸ ಮಾಡಲಾಗುತ್ತದೆ. ಒಂದು ಭಾಗ ಪೂರ್ಣವಾಗಿ ಇನ್ನೊಂದರ ಕೆಲಸ ಕೈಗೆತ್ತಿಕೊಳ್ಳುವಷ್ಟರಲ್ಲಿ  ಮೊದಲ ಭಾಗ ಯಥಾಸ್ಥಿತಿಗೆ ಬರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ