ತನು ಮನ ಜಯ ಭಾರತ

ಮೈಸೂರು:  ನಡು ಮಧ್ಯಾಹ್ನ ಮೈಸೂರಿನ ಬಹುತೇಕ ಎಲ್ಲ ರಸ್ತೆಗಳಲ್ಲೂ ನೀರವತೆ. ಜನಸಂಚಾರ ವಿರಳ.  ಆದರೆ  ರಾತ್ರಿ ೧೦.೩೦ರ ಸುಮಾರಿಗೆ ಅದೇ ರಸ್ತೆಗಳಲ್ಲಿ  ಒಮ್ಮಿಂದೊಮ್ಮೆಲೆ ಟ್ರಾಫಿಕ್ ಜಾಮ್ !
ಮಕ್ಕಳು-ಹಿರಿಯರು ಎಂಬ ತಾರತಮ್ಯವಿಲ್ಲದೇ ನೂರಾರು ಜನ ರಸ್ತೆಗಿಳಿದು ಕೇಕೆ ಹಾಕಿದರು, ಕುಣಿದು ಕುಪ್ಪಳಿಸಿದರು, ತ್ರಿ ವರ್ಣ ಧ್ವಜ  ಹಿಡಿದು ರಸ್ತೆಯಲ್ಲೆಲ್ಲಾ  ಓಡಾಡಿದರು, ಪಟಾಕಿ ಸಿಡಿಸಿ ಸಂಭ್ರಮಿಸಿದರು.... ಕೆಲವರಂತೂ ಧರಿಸಿದ ಬಟ್ಟೆ ಬಿಚ್ಚಿ, ಗಾಳಿಯಲ್ಲಿ ತೂರಾಡಿದರು.
ಸಂಭ್ರಮ ಹೀಗೆಲ್ಲಾ ಸ್ಫೋಟವಾಗುವುದು ಸಾಧ್ಯವೇ ಎಂದು ಜನ ನಿಬ್ಬೆರಗಾಗಿ ನೋಡುವಂತೆ, ಮೈಸೂರಿಗೆ ಮೈಸೂರೇ ಸಂತಸದಲ್ಲಿ ಮುಳುಗೇಳುವಂತೆ ಮಾಡಿದ್ದು ಮೊಹಾಲಿಯ ಅರ್ಹ ಗೆಲುವು.  ಎಲ್ಲರ ಬಾಯಲ್ಲೂ ಒಂದೇ ತಾರಕ ಘೋಷಣೆ- ಭಾರತ್ ಮಾತಾ ಕಿ ಜೈ !
ಪ್ರಮುಖ ವೃತ್ತಗಳಾದ ಹೃದಯ ಭಾಗದ ಕೆ. ಆರ್. ವೃತ್ತ, ಅಗ್ರಹಾರ, ರಾಮಸ್ವಾಮಿ ವೃತ್ತ, ವಿವೇಕಾನಂದ ವೃತ್ತ, ಮಾತೃಮಂಡಳಿ ಸೇರಿದಂತೆ ಎಲ್ಲ ವೃತ್ತಗಳಲ್ಲೂ  ಹಬ್ಬದ ಸಂಭ್ರಮವೇ. ಯುಗಾದಿಗೆ ಮೂರು ದಿನ ಮುಂಚಿತವೇ ಮೈಸೂರು ಜನ ಚಂದ್ರ ದರ್ಶನ ಮಾಡಿದಂತೆ ಸಂತಸಪಟ್ಟರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ