ವಿಕ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ

ಫಾಲಲೋಚನ ಆರಾಧ್ಯ ಚಾಮರಾಜನಗರ
ಯಾವುದೇ ಒಂದು ಊರಿನ ಅಭಿವೃದ್ಧಿಯಲ್ಲಿ ರಸ್ತೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾರಾದರೂ ಒಂದು ಊರಿಗೆ ಹೋಗ ಬೇಕಾದರೆ ಮೊದಲು ವಿಚಾರಿಸೋದು ರಸ್ತೆ ಚೆನ್ನಾಗಿದಿಯೇ ಎಂದು ?
ಹಾದಿ ಚೆನ್ನಾಗಿಲ್ಲ ಎಂದರೆ ಆ ಊರಿನ ಅಥವಾ ಪಟ್ಟಣವೂ ಚೆಂದ ಕಾಣುವುದಿಲ್ಲ. ಅಲ್ಲಿ ಸಂಚರಿಸುವವರಿಗೆ ನಿತ್ಯ ಕಿರಿಕಿರಿ. ಈ ನಿಟ್ಟಿನಲ್ಲಿ ವಿಜಯ ಕರ್ನಾಟಕ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಮುಖ್ಯ ಹೋಬಳಿ ಕೇಂದ್ರಗಳ ವ್ಯಾಪ್ತಿ ಹಾಗೂ ಅವುಗಳ ಸಂಪರ್ಕ ರಸ್ತೆಗಳ ಸ್ಥಿತಿಗತಿಯನ್ನು ಒಂದು ವಾರ ತೆರೆದಿಟ್ಟಿತ್ತು.  ಜಿಲ್ಲೆಯ ಯಾವ ಕಡೆ ಹೋದರೂ ಉತ್ತಮ ರಸ್ತೆಗಳು ಎಂಬದು ವಿರಳ. ಹದಗೆಟ್ಟ, ರಾಡಿ ಹಿಡಿದ ರಸ್ತೆಗಳ ಸಂಖ್ಯೆಯೇ ಹೆಚ್ಚು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ