ಹೆದ್ದಾರಿ ಓಕೆ, ಉಳಿದ ರಸ್ತೆ ಹೀಗೇಕೆ !

ರಾಘವಾಪುರ  ದೇವಯ್ಯ ಬೇಗೂರು
ಗುಂಡ್ಲುಪೇಟೆ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಬೇಗೂರು ಗ್ರಾಮದ ಮಧ್ಯೆ ರಾಷ್ಟ್ರೀಯ ಹೆದ್ದಾರಿ ೨೧೨ ಹಾದು ಹೋಗಿದೆ. ಇದೊಂದು ರಸ್ತೆಯನ್ನು ಹೊರತು ಪಡಿಸಿ ಉಳಿದ ರಸ್ತೆಗಳ ಸ್ಥಿತಿ ಚಿಂತಾಜನಕ. ಈ ರಸ್ತೆಗಳ ದುರಸ್ತಿಗೆ ಸಣ್ಣ, ಪುಟ್ಟ ಆಪರೇಷನ್ ಸಾಲದು. ಮೇಜರ್ ಸರ್ಜರಿಯೇ ನಡಿಯಬೇಕು.  ಆ ಮಟ್ಟಕ್ಕೆ ಹದಗೆಟ್ಟಿವೆ ಇಲ್ಲಿನ ರಸ್ತೆಗಳು.
ಬೇಗೂರು ದೊಡ್ಡೂರು. ಹೋಬಳಿಯೊಂದಿಗೆ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವೂ ಹೌದು. ಆದರೆ  ಈ ಊರಿನ ರಸ್ತೆಗಳೆಲ್ಲಾ ಸಣ್ಣವು. ಇಂಥ ಸಣ್ಣ ರಸ್ತೆಗಳನ್ನು ಸರಿಯಾಗಿ ಇಟ್ಟುಕೊಳ್ಳುವಲ್ಲಿ ಗ್ರಾ.ಪಂ. ಆಡಳಿತ ನಿರ್ಲಕ್ಷ್ಯ ವಹಿಸಿದೆ. ಅಭಿವೃದ್ಧಿಯ `ಪ್ರಸಾದ'ವೂ ರಸ್ತೆಗಳಿಗೆ ಸಿಗದೇ ಇರುವುದು ದುರದೃಷ್ಟಕರ.  ಯಾವ ಜನಪ್ರತಿನಿಧಿಗಳು ಸಹ ಬೇಗೂರಿನ ರಸ್ತೆಗಳ ಬಗ್ಗೆ ಕಾಳಜಿ ವಹಿಸಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ