ಬಡಾವಣೆಯಿಂದ ಬಡಾವಣೆಗೆ ನೇರ ಸೌಲಭ್ಯ

ಏಳು ದಿನ ನಡೆದ ಚರ್ಚೆಯಲ್ಲಿ ಸ್ಪಷ್ಟಗೊಂಡ ಮಹತ್ವದ ಅಂಶವೆಂದರೆ ನಗರದ ಬಹಳಷ್ಟು ಮಂದಿಗೆ ಬಸ್ ಮೇಲೆ ಪ್ರೀತಿ ಇದೆ. ಕಾರಣ ಕಾಳಜಿ, ಪ್ರೀತಿ ಇದ್ದವರ ಮೇಲೆ ಮಾತ್ರ ನಾವು ಅಧಿಕಾರಯುಕ್ತ ಟೀಕೆ ಮಾಡುತ್ತೇವೆ. ಇದೇ ಸಂವಾದದಲ್ಲಿ ಕೇಳಿ ಬಂದಿರುವುದು ಆ ಧ್ವನಿಯ ಮಾತೇ ಹೊರತು ದೂರುಗಳಲ್ಲ. ನಗರ ಸಾರಿಗೆ ವಿಭಾಗದ ಅಧಿಕಾರಿಗಳು  ಹೊಸ ಪರಿಕ್ರಮಕ್ಕೆ ಮುಂದಾಗುವ ಉತ್ಸಾಹದ ಜತೆಗೆ ಹಳತನ್ನು ಸರಿ ಮಾಡಬೇಕೆಂಬುದೇ ಈ ಅಭಿಯಾನದ ಆಗ್ರಹ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ