ಪ್ರಕೋಪಕ್ಕೆ ರೀಕೋ ತಲ್ಲಣ, ತಳಮಳ

* ಚೀ. ಜ. ರಾಜೀವ  ಮೈಸೂರು
ನಮಗೆ ಭೂಕಂಪನ ಹೊಸತಲ್ಲ. ಭೂಮಿ ನಡುಗುವುದನ್ನು ಆಗಾಗ ಅನುಭವಿಸಿದ್ದೇವೆ. ಆದರೆ, ಭೂ ಕಂಪನ, ತ್ಸುನಾಮಿಗಳು
ಈ ಪರಿ ದೈತ್ಯ ರೂಪವನ್ನು ಹೊತ್ತು, ನನ್ನ ದೇಶವನ್ನೇ ಕೊಚ್ಚಿಕೊಂಡು ಹೋದರೆ, ಯಾರನ್ನು ದೂಷಿಸಲಿ,ಯಾರಿಗೆ  ಮೊರೆ ಇಡಲಿ... ?   
-ಜಪಾನಿನ ಟೋಕಿಯೋ ನಗರದ ರೀಕೋ ಪ್ರಶ್ನೆ ಇದು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ  ಸಮಾಜಶಾಸ್ತ್ರ ವಿಷಯ ದಲ್ಲಿ ಎಂಎ ವ್ಯಾಸಂಗ ಮಾಡುತ್ತಿರುವ ರೀಕೋ ಶುಕ್ರವಾರ ಬೆಳಗ್ಗೆಯಿಂದ ವ್ಯಾಕುಲಕ್ಕೆ ಬಿದ್ದಿದ್ದಾಳೆ.
ವಿಷಯ ಗೊತ್ತಾದ ಕ್ಷಣದಿಂದ ಸಂಜೆವರೆಗೂ ಆಕೆಗೆ ಟೋಕಿಯೋದಲ್ಲಿರುವ ತನ್ನ ಕುಟುಂಬವನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಸಾಧ್ಯವಾಗಿಲ್ಲ. ಆದರೆ, ಇಂಟರ್‌ನೆಟ್ ಮೂಲಕ ಸ್ನೇಹಿತರೊಂದಿಗೆ ಚಾಟ್ ಮಾಡಿ, ತನ್ನ  ಕುಟುಂಬ ವಾಸವಿರುವ  ಪ್ರಾಂತ್ಯದಲ್ಲಿ ಗಂಭೀರ ಪ್ರಮಾಣದ ಅನಾಹುತ ಆಗಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡಿದ್ದಾಳೆ.
ತನ್ನ ಕುಟುಂಬ ಪ್ರಾಣಾಪಾಯದ ದವಡೆಯಿಂದ ಪಾರಾಗಿದೆ ಎಂಬ ಸಮಾಧಾನ ಇದ್ದರೂ, ವಿಕೋಪ ಪೀಡಿತ ಪ್ರಾಂತ್ಯದ ತನ್ನವರು ಏನಾದರೋ ಎಂಬ ಆತಂಕ ಆಕೆಯದ್ದು.
ದುಗುಡ ದುಮ್ಮಾನ: ಹಾಗಾಗಿ ಬೆಳಗಿನಿಂದ ಹೊಟ್ಟೆಗೆ ಏನೂ ತಿನ್ನದೇ ಸಂಕಟದಲ್ಲಿಯೇ  ಟೋಕಿಯೋದ ತನ್ನವರನ್ನು ಸಂಪರ್ಕಿಸಲು ಯತ್ನಿಸುತ್ತಿರುವ ೩೫ ವರ್ಷದ ರೀಕೋ `ವಿಜಯ ಕರ್ನಾಟಕ'ದೊಂದಿಗೆ ತನ್ನ ದುಗಡ-ದುಮ್ಮಾನವನ್ನು ಹಂಚಿಕೊಂಡಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ