ಬಡವರ ಹೃದಯ ನೋವಿಗೆ ಮಿಡಿಯುತ್ತಿದೆ ಜಯದೇವ ಘಟಕ

ಜೆ.ಶಿವಣ್ಣ  ಮೈಸೂರು
ನಗರದ ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ `ಜಯದೇವ ಹೃದ್ರೋಗ ಘಟಕ'ಸದಾ ರಶ್. ಘಟಕದಲ್ಲಿರುವ ೭೦ ಹಾಸಿಗೆಗಳು ನಿರಂತರ ಭರ್ತಿ.
ಇದು ಹೃದಯ ರೋಗಗಳ ಚಿಕಿತ್ಸೆಯ ಅಗತ್ಯಕ್ಕೆ ಹಿಡಿದ ಕನ್ನಡಿ. ಬೇನೆ  ಇದ್ದರೂ ದುಬಾರಿ ಎನ್ನುವ ಕಾರಣಕ್ಕೆ ಚಿಕಿತ್ಸೆ ಪಡೆಯದೇ ನರಳುತ್ತಿದ್ದ ಅನೇಕರ ಪಾಲಿಗೆ ಘಟಕ ಸಂಜೀವಿನಿ. ಶೇ.೭೫ ಕ್ಕೂ ಮಿಗಿಲಾಗಿ ಬಡವರು, ಗ್ರಾಮೀಣರು ಸೇವೆ ಪಡೆಯುತ್ತಿರುವುದು ಗಮನಾರ್ಹ. ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆ ದುಬಾರಿಯಾಗಿರುವಾಗ ಖಾಸಗಿ ಆಸ್ಪತ್ರೆಗೆ ಹೋಲಿಸಿ ದರೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ಇಲ್ಲಿ ಲಭ್ಯ.
ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಮಾನವೀಯ ನೆಲೆಯಲ್ಲಿ ಬಡವರಿಂದ  ಚಿಕಿತ್ಸಾ ವೆಚ್ಚ ಪಡೆದಿರುವ, ಜಯದೇವ ಸಂಸ್ಥೆಯೇ ಉಳಿಕೆ ಮೊತ್ತವನ್ನು ಭರಿಸಿರುವ, ನಿರಾಶ್ರಿತರಿಗೆ ಉಚಿತ ಚಿಕಿತ್ಸೆ ನೀಡಿರುವ ಉದಾಹರಣೆ ಗಳು ಅನೇಕ.`ರೋಗಿಯ ಆರ್ಥಿಕ ಸಾಮರ್ಥ್ಯವೇನೇ ಇರಲಿ, ಚಿಕಿತ್ಸೆ ಅಗತ್ಯವಿರುವ ಪ್ರತಿಯೊಬ್ಬರಿಗೂ ಗುಣ ಮಟ್ಟದ ಚಿಕಿತ್ಸೆ ದೊರೆಯತಕ್ಕದ್ದು' ಎನ್ನುವ ಧ್ಯೇಯ ದೊಂದಿಗೆ ಸಂಸ್ಥೆ ಕಾರ್ಯನಿರತವಾಗಿದೆ. ಮತ್ತೊಂದೆಡೆ ಹೃದಯ ಸಂಜೀವಿನಿ,ಯಶಸ್ವಿನಿ ಯೋಜನೆಗಳು ಬಡವರ ನೆರವಿಗೆ ನಿಂತಿವೆ. ಹೃದಯ ಸಂಜೀವಿನಿ ಯೋಜನೆಯಡಿ ೭೦ ಸಾವಿರ ರೂ.ವರೆಗೆ ಉಚಿತ ಚಿಕಿತ್ಸೆ ಸಾಧ್ಯ.ಯಶಸ್ವಿನಿ ಯೋಜನೆಯಲ್ಲೂ ಉಚಿತ ಸೇವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ