ತಲೆ ಕೆಡಿಸಿಕೊಳ್ಳದ ಜನಪ್ರತಿನಿಧಿಗಳು, ಜನತೆಗೆ ನಿತ್ಯ ಬವಣೆ

ಪುರುಷೋತ್ತಮ್ ಸಂತೇಮರಹಳ್ಳಿ
ಚಾ.ನಗರ ತಾ.ಹೋಬಳಿ ಕೇಂದ್ರಗಳ ಪೈಕಿ ಸಂತೇಮರಹಳ್ಳಿ ಪ್ರಮುಖವಾದದ್ದು. ಇದು ಜಿಲ್ಲಾ ಕೇಂದ್ರ ಸೇರಿದಂತೆ ೫ ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಜಂಕ್ಷನ್. ಆದರೆ ಈ ಊರಿನ ರಸ್ತೆಗಳು ಓಡಾಟಕ್ಕೆ ಯೋಗ್ಯವಾಗಿಲ್ಲ. ಇಲ್ಲಿನ ರಸ್ತೆಗಳ ಸ್ಥಿತಿ ಬಗ್ಗೆ ಜನಪ್ರತಿನಿಧಿಗಳಾದವರೂ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ.  ಇದರಿಂದಾಗಿ ಜನತೆ ನಿತ್ಯ ಬವಣೆ ಪಡುವಂತಾಗಿದೆ.
ಮರಹಳ್ಳಿಯಲ್ಲಿ ಪ್ರತಿ ಮಂಗಳವಾರ ಬೃಹತ್ ಪ್ರಮಾಣದ ಸಂತೆ ನಡೆಯುತ್ತದೆ. ಹೀಗಾಗಿಯೇ ಇದಕ್ಕೆ ಸಂತೇಮರಹಳ್ಳಿ ಎಂಬ ಹೆಸರು ಬಂದಿದೆ. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ತಂದು ಈ ಸಂತೆಯಲ್ಲಿ  ಮಾರಾಟ ಮಾಡುತ್ತಾರೆ. ಊರು ಇಷ್ಟು ಜನಪ್ರಿಯವಾಗಿದ್ದರೂ ರಸ್ತೆಗಳ ವಿಚಾರದಲ್ಲಿ ಶಾಪಗ್ರಸ್ತ. ಊರಿನ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ೨೦೯ ಅನ್ನು ಹೊರತು ಪಡಿಸಿ ಇನ್ನಾವ ರಸ್ತೆಯೂ `ಸುಮಾರು' ಎಂಬ ಮಟ್ಟಿಗೂ ಇಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ