ವಿವಿ ಅಂಗಳದಲ್ಲಿ ಗಹನ ಚರ್ಚೆ...

ವಿಕ ವಿಶೇಷ  ಮೈಸೂರು
ಪ್ರಾಧ್ಯಾಪಕರೊಬ್ಬರ ಮೇಲೆ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಹೊರಿಸಿರುವ  ಲೈಂಗಿಕ ಕಿರು ಕುಳ ಪ್ರಕರಣವನ್ನು ಮುಂದಿಟ್ಟುಕೊಂಡು ಮೈಸೂರು ವಿವಿ ಕುಲಪತಿ ಪ್ರೊ.ವಿ. ಜಿ. ತಳವಾರ್ ಅವರ ತೇಜೋವಧೆಗೆ ಯತ್ನ ನಡೆದಿದೆಯೇ? ಪ್ರೊ.ತಳವಾರ್  ಆಡಳಿತ ನೀಡಲು ಅಸಮರ್ಥರು ಎಂಬುದನ್ನು ಬಿಂಬಿಸಲು ಕೆಲ ಶಕ್ತಿಗಳು ಯತ್ನಿಸುತ್ತಿವೆಯೇ ?
ಗಂಗೋತ್ರಿಯ ಅಂಗಳದಲ್ಲಿ ಇಂಥ ಅನುಮಾನ ಗಳು ಶುರುವಾಗಿವೆ.  ಇದೇ ವಿಷಯವಾಗಿ ವಿವಿಯ ಕೆಲವು ಪ್ರಾಧ್ಯಾಪಕರು,ಅಧ್ಯಾಪಕ ಹಾಗೂ ನೌಕರರ ಸಂಘಟನೆ ಗಳ ಪದಾಧಿಕಾರಿಗಳು ದನಿ ಎತ್ತಲಾರಂಭಿಸಿದ್ದಾರೆ. 
ತಮ್ಮ ಕಚೇರಿ ಹಾಗೂ ಅಧಿಕಾರದ  ವ್ಯಾಪ್ತಿಯಲ್ಲಿ ಯಾವುದೆಲ್ಲಾ ರೀತಿ  ಕ್ರಮ ಜರುಗಿಸಬಹುದೋ - ಅಷ್ಟರ ಮಟ್ಟಿಗೆ  ಎಲ್ಲ ಕ್ರಮ ಕೈಗೊಂಡಿದ್ದರೂ, ಕುಲಪತಿ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೆ, ಸಂಶೋಧನಾ ವಿದ್ಯಾ ರ್ಥಿನಿ ಸರಿತಾ ಅವರು ನೀಡಿದ ದೂರಿನ ಆಧಾರದ ಮೇಲೆ ಕುಲಪತಿಯನ್ನೇ  ಆರೋಪಿಯನ್ನಾಗಿಸಿರುವುದು ಕೆಲವರಿಗೆ ಆತಂಕ ಹಾಗೂ ಅಚ್ಚರಿ ಮೂಡಿಸಿದೆ. ಈ ನಡುವೆ ಶಿವಬಸವಯ್ಯ ವಿರುದ್ಧ  ದೂರು ನೀಡಿರುವ ಎಂ. ಸರಿತಾ ಹಾಗೂ ಡಾ.ವಿಜಯ್‌ಕುಮಾರ್ ದಂಪತಿ, `ನಾವು ಕುಲಪತಿ ವಿರುದ್ಧ ದೂರು ನೀಡಿಲ್ಲ ಹಾಗೂ ಅದು ನಮ್ಮ ಉದ್ದೇಶವೇ ಆಗಿರಲಿಲ್ಲ. ದೂರಿನಲ್ಲಿ ಅವರ ಹೆಸರು ಹೇಗೆ ಸೇರಿತು, ಅದಕ್ಕೆ ಯಾರು ಕಾರಣ ಎಂಬುದು ನಮಗೆ ತಿಳಿದಿಲ್ಲ' ಎಂದು ಹೇಳಿಕೆ ನೀಡಿರುವುದು ಸಂದೇಹವನ್ನು ಹೆಚ್ಚಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ