ಗ್ರಾಹಕರ ದಿನದಲ್ಲಿ ಪರಿಹಾರ ವೇದಿಕೆ ಅಧ್ಯಕ್ಷರ ಕಿವಿಮಾತು

ಮೈಸೂರು ನಗರ
ನಗರದಲ್ಲಿ ಮಂಗಳವಾರ ಗ್ರಾಹಕನ ಧ್ಯಾನ.
ವಿಶ್ವ ಗ್ರಾಹಕರ ದಿನಾಚರಣೆ ಸಂದರ್ಭದಲ್ಲಿ ಹಲವು ಸಂಘಟನೆ ಗಳು ಗ್ರಾಹಕ ಕೇಂದ್ರಿತ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.
ಜಿಲ್ಲಾಡಳಿತ, ಆಹಾರ ಇಲಾಖೆ, ಎಂಜಿನಿಯರ್ ಸಂಸ್ಥೆ ಸಹಯೋಗದಲ್ಲಿ ಪ್ರಮುಖ ಕಾರ್ಯಕ್ರಮ ನಡೆಯಿತು.  ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗ್ರಾಹಕ ಹಕ್ಕುಗಳ ಕುರಿತು ಮಾಹಿತಿ ಪಡೆದುಕೊಂಡರು.
ಮೈಸೂರು ಗ್ರಾಹಕರ ಪರಿಷತ್ ಹಿನಕಲ್‌ನಲ್ಲಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಿತ್ತು. ಇದರ ಅಂಗವಾಗಿ ಹಲವು ಪ್ರಾತ್ಯಕ್ಷಿಕೆ ಗಳನ್ನು ಶ್ರೀಮತಿ ಹರಿಪ್ರಸಾದ್, ಒಂಭತ್ಕೆರೆ, ಸಿ.ವಿ. ನಾಗರಾಜು, ಎ.ಆರ್.ವೆಂಕಟೇಶನ್ ಮತ್ತಿತರರು ನಡೆಸಿಕೊಟ್ಟರು.
ಗಾಂಧಿ ವೃತ್ತದಲ್ಲೂ ಗ್ರಾಹಕರಿಗೆ ಜಾಗೃತಿ ಮೂಡಿಸುವ ಫಲಕ ಹಿಡಿದ ಪ್ರಮುಖರು ಕಾರ್ಯಕ್ರಮ ನಡೆಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ