ಅಧಿಕಾರಿಗಳ ಬೇಜವಾಬ್ದಾರಿ

ನವೀನ್ ಮಂಡ್ಯ
ಇಲ್ಲೊಂದು ಕೈಗಾರಿಕಾ ವಸಾಹತು ಇದೆ. ಇಲ್ಲಿಗೆ ಸಾರಿಗೆ ಸೇವೆ ಅತ್ಯುತ್ತಮವಾಗಿದೆ. ಉದ್ಯಮಿಗಳು ಕೈಗಾರಿಕೆಗಳನ್ನು ಆರಂಭಿಸಲು ಸಿದ್ಧರಿ ದ್ದಾರೆ. ಆದರೆ, ಇವರನ್ನು ಉತ್ತೇಜಿಸಲು ಇರಬೇಕಾದ ಸೂಕ್ತ ಮೂಲ ಸೌಕರ್ಯಗಳೇ ಇಲ್ಲ.
ಕುಡಿಯುವ ನೀರು, ವಿದ್ಯುತ್, ಬೀದಿ ದೀಪಗಳು, ಚರಂಡಿ, ಶೌಚಾ ಲಯ, ಕಾಂಪೌಂಡ್ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಹಾಗೂ ಅವ್ಯವಸ್ಥೆ ಗಳು ತಾಂಡವವಾಡುತ್ತಿವೆ. ಇದು ನಗರದ ಹೊರವಲಯದಲ್ಲಿನ ೨ನೇ ಹಂತದ ಕೈಗಾರಿಕಾ ವಲಯದ ಸ್ಥಿತಿಗತಿ.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ(ಕೆಎಸ್‌ಎಸ್‌ಐಡಿಸಿ)ವು ೧೯೮೮ರಲ್ಲೇ ನಗರದಲ್ಲಿ ಎರಡನೇ ಹಂತದ ಕೈಗಾರಿಕಾ ವಸಾಹತುವನ್ನು ಅಭಿವೃದ್ಧಿಪಡಿಸಿದೆ. ಇಲ್ಲಿ ೩೫ ಕೈಗಾರಿಕಾ ಮಳಿಗೆಗಳನ್ನು (ಶೆಡ್‌ಗಳು)ನ್ನು ನಿರ್ಮಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ