ಬಸ್ ದಿನ ನಾಂದಿಯಾಗುವುದೆ

ಮೈಸೂರು ನಗರ
ಇವತ್ತಿನ ವಾಹನ ದಟ್ಟಣೆಗೆ ಸಾಮೂಹಿಕ ಸಾರಿಗೆ ವ್ಯವಸ್ಥೆ ಅಲ್ಪಮಟ್ಟಿಗಿನ ಪರಿಹಾರ ಎನ್ನಬಹುದು.
ಪರಿಸರ ನಾಶ ತಡೆ, ಅಪಘಾತ ತಡೆ, ಇಂಧನ ಉಳಿತಾಯ... ಎಲ್ಲಕ್ಕೂ ಕೂಡ. ಬಸ್ ಡೇ ಇದಕ್ಕೆ ನಾಂದಿ ಆಗಬಲ್ಲದೇ?
ಬಸ್ ಡೇ ವಿನೂತನ ಪರಿಕಲ್ಪನೆಗೆ ಸಾರ್ವಜನಿಕರ ಸಹಕಾರ ಬೇಕು. ನಿಜ, ಮಿಗಿಲಾಗಿ ಸಾರಿಗೆ ಅಧಿಕಾರಿಗಳಿಗೆ ಬದ್ಧತೆ ಬೇಕು. ಯಾರೋ ಒಬ್ಬರೀ, ಇಬ್ಬರೋ ಅಧಿಕಾರಿಗಳಿಗೆ ಕಾಳಜಿಯಿದ್ದರೆ ಸಾಲದು, ಸಾಮೂಹಿಕ ಕಾಳಜಿ ಅವಶ್ಯ. ಬಸ್ ಡೇ ಕಾಟಾಚಾರ ವಾಗಬಾರದು. ಕೇವಲ `ಆಚರಣೆ'ಯಾಗಿ ಒಂದು ದಿನಕ್ಕೆ ಸೀಮಿತ ವಾಗಬಾರದು. ಆ ದಿನ ಹೆಚ್ಚು ಹೆಚ್ಚು ಜನರು ಬಸ್‌ನಲ್ಲಿ ಪ್ರಯಾಣಿಸುವಂತೆ ಮಾಡಿ ಯಶಸ್ಸು ಪಡೆಯುವುದು ದೊಡ್ಡದಲ್ಲ. ಸದಾ ಉತ್ತಮ ಸೇವೆ ಒದಗಿಸಿ ಜನರಲ್ಲಿ `ನಂಬಿಕೆ' ಮೂಡಿಸುವ ಕೆಲಸ ಮೊದಲಾಗಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ