ಭಾರತ ತಂಡಕ್ಕೆ ಶುಭಹಾರೈಸಿ ಬೈಕ್ ರ್ಯಾಲಿ
ಸೆಮಿಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಗೆಲುವಿಗೆ ಶುಭಹಾರೈಸಿ ಮೈಸೂರಿನಲ್ಲಿ ಯುವಕರು ಬುಧವಾರ ಬೈಕ್ ರ್ಯಾಲಿ ನಡೆಸಿದರು.
ಜಯಲಕ್ಷ್ಮಿಪುರಂನ ಮಹಾಜನ ಪದವಿ ಕಾಲೇಜಿನ ಕೆಲ ವಿದ್ಯಾರ್ಥಿಗಳು ಹಾಗೂ ಒಂಟಿಕೊಪ್ಪಲು, ಪಡುವಾರಹಳ್ಳಿಯ ಯುವಕರು ಸೇರಿದಂತೆ ಸುಮಾರು ೩೦ಕ್ಕೂ ಹೆಚ್ಚು ಮಂದಿ ರ್ಯಾಲಿಯಲ್ಲಿ ಪಾಲ್ಗೊಂಡರು. ಒಂಟಿಕೊಪ್ಪಲ್ನಿಂದ ಮಧ್ಯಾಹ್ನ ೧೨ಕ್ಕೆ ರ್ಯಾಲಿ ಹೊರಟಿತು. ಕೆನ್ನೆ ಮೇಲೆ ತಿರಂಗ ಚಿಹ್ನೆ ಬಿಡಿಸಿಕೊಂಡು, ತ್ರಿವರ್ಣ ಧ್ವಜ ಹಿಡಿದುಕೊಂಡು ಉತ್ಸಾಹದಿಂದ ಬೀಗುತ್ತಿದ್ದ ಯುವಕರು ಭಾರತಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಪಡುವಾರಹಳ್ಳಿ, ವಿನೋಬಾರಸ್ತೆ ಮತ್ತಿತರ ಪ್ರಮುಖ ರಸ್ತೆಗಳಲ್ಲಿ ಪಂದ್ಯ ಪ್ರಾರಂಭವಾಗುವವರೆಗೂ ಟೀಂ ಇಂಡಿಯಾ ಪರ ಘೋಷಣೆ ಕೂಗುತ್ತಾ ರ್ಯಾಲಿ ನಡೆಸಿ ಗಮನಸೆಳೆದರು.
ಸೆಮಿಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಗೆಲುವಿಗೆ ಶುಭಹಾರೈಸಿ ಮೈಸೂರಿನಲ್ಲಿ ಯುವಕರು ಬುಧವಾರ ಬೈಕ್ ರ್ಯಾಲಿ ನಡೆಸಿದರು.
ಜಯಲಕ್ಷ್ಮಿಪುರಂನ ಮಹಾಜನ ಪದವಿ ಕಾಲೇಜಿನ ಕೆಲ ವಿದ್ಯಾರ್ಥಿಗಳು ಹಾಗೂ ಒಂಟಿಕೊಪ್ಪಲು, ಪಡುವಾರಹಳ್ಳಿಯ ಯುವಕರು ಸೇರಿದಂತೆ ಸುಮಾರು ೩೦ಕ್ಕೂ ಹೆಚ್ಚು ಮಂದಿ ರ್ಯಾಲಿಯಲ್ಲಿ ಪಾಲ್ಗೊಂಡರು. ಒಂಟಿಕೊಪ್ಪಲ್ನಿಂದ ಮಧ್ಯಾಹ್ನ ೧೨ಕ್ಕೆ ರ್ಯಾಲಿ ಹೊರಟಿತು. ಕೆನ್ನೆ ಮೇಲೆ ತಿರಂಗ ಚಿಹ್ನೆ ಬಿಡಿಸಿಕೊಂಡು, ತ್ರಿವರ್ಣ ಧ್ವಜ ಹಿಡಿದುಕೊಂಡು ಉತ್ಸಾಹದಿಂದ ಬೀಗುತ್ತಿದ್ದ ಯುವಕರು ಭಾರತಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಪಡುವಾರಹಳ್ಳಿ, ವಿನೋಬಾರಸ್ತೆ ಮತ್ತಿತರ ಪ್ರಮುಖ ರಸ್ತೆಗಳಲ್ಲಿ ಪಂದ್ಯ ಪ್ರಾರಂಭವಾಗುವವರೆಗೂ ಟೀಂ ಇಂಡಿಯಾ ಪರ ಘೋಷಣೆ ಕೂಗುತ್ತಾ ರ್ಯಾಲಿ ನಡೆಸಿ ಗಮನಸೆಳೆದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ