ವಿಕ ಸುದ್ದಿಲೋಕ ಮೈಸೂರು
ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಹಾಗೂ ಮೈಸೂರು ಕುಸ್ತಿ ಅಭಿವೃದ್ಧಿ ಸೇವಾ ಟ್ರಸ್ಟ್ ಪಾರಂಪರಿಕ ಕಲೆ ಕುಸ್ತಿ ಯನ್ನು ಉಳಿಸಿ,ಬೆಳೆಸುವ ಆಶಯ ದೊಂದಿಗೆ ಆರಂಭಿಸಿರುವ `ಮರಳಿ ಬಾ ಗರಡಿಗೆ' ಎರಡನೇ ನಿರಂತರ ಕುಸ್ತಿ ಪಂದ್ಯಾವಳಿಯಲ್ಲಿ ೨೫ ಜೋಡಿ ಕಾಟಾ ಕುಸ್ತಿಗಳು ಭಾನುವಾರ ಯಶಸ್ವಿಯಾಗಿ ನಡೆದವು.
ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಕೆಮ್ಮಣ್ಣಿನ ವಿಶಾಲ ಅಖಾಡದಲ್ಲಿ ಮಲ್ಲರು ಅಕ್ಷರಶಃ ಕಾದಾಡಿದರು. ಜಟ್ಟಿಗಳು ತೊಡೆ, ತೋಳು ತಟ್ಟಿ, ಮಟ್ಟಿ ಮಣ್ಣಿನ ಮೇಲೆ ತಮ್ಮೆಲ್ಲಾ ಪಟ್ಟುಗಳನ್ನು ಹಾಕಿದರು. ಬಲಿಷ್ಠ ತೋಳುಗಳ ಬಿಗಿ ಹಿಡಿತಕ್ಕೆ ಸಾಮು, ದಂಡ ಮಾಡಿ ಹುರಿ ಗಟ್ಟಿದ ಶರೀರವೂ ನಜ್ಜುಗುಜ್ಜು, ಉಕ್ಕಿನ ಹಿಡಿತದಿಂದ ಬಿಡಿಸಿಕೊಳ್ಳಲು ಪರಸ್ಪರ ಹೆಣಗಾಟ, ಸೆಣಸಾಟ. ಪಟ್ಟಿಗೆ ಪ್ರತಿ ಪಟ್ಟು. ಗೆಲುವಿನ ನಗೆ ಬೀರಿದ ಒಬ್ಬ ಪಟು, ಸೋತರೂ ಪ್ರೀತಿಯಿಂದಲೇ ಸೋಲನ್ನು ಸ್ವೀಕರಿಸಿ ನಡೆದ ಮತ್ತೊಬ್ಬ ಪಟು.
ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಹಾಗೂ ಮೈಸೂರು ಕುಸ್ತಿ ಅಭಿವೃದ್ಧಿ ಸೇವಾ ಟ್ರಸ್ಟ್ ಪಾರಂಪರಿಕ ಕಲೆ ಕುಸ್ತಿ ಯನ್ನು ಉಳಿಸಿ,ಬೆಳೆಸುವ ಆಶಯ ದೊಂದಿಗೆ ಆರಂಭಿಸಿರುವ `ಮರಳಿ ಬಾ ಗರಡಿಗೆ' ಎರಡನೇ ನಿರಂತರ ಕುಸ್ತಿ ಪಂದ್ಯಾವಳಿಯಲ್ಲಿ ೨೫ ಜೋಡಿ ಕಾಟಾ ಕುಸ್ತಿಗಳು ಭಾನುವಾರ ಯಶಸ್ವಿಯಾಗಿ ನಡೆದವು.
ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಕೆಮ್ಮಣ್ಣಿನ ವಿಶಾಲ ಅಖಾಡದಲ್ಲಿ ಮಲ್ಲರು ಅಕ್ಷರಶಃ ಕಾದಾಡಿದರು. ಜಟ್ಟಿಗಳು ತೊಡೆ, ತೋಳು ತಟ್ಟಿ, ಮಟ್ಟಿ ಮಣ್ಣಿನ ಮೇಲೆ ತಮ್ಮೆಲ್ಲಾ ಪಟ್ಟುಗಳನ್ನು ಹಾಕಿದರು. ಬಲಿಷ್ಠ ತೋಳುಗಳ ಬಿಗಿ ಹಿಡಿತಕ್ಕೆ ಸಾಮು, ದಂಡ ಮಾಡಿ ಹುರಿ ಗಟ್ಟಿದ ಶರೀರವೂ ನಜ್ಜುಗುಜ್ಜು, ಉಕ್ಕಿನ ಹಿಡಿತದಿಂದ ಬಿಡಿಸಿಕೊಳ್ಳಲು ಪರಸ್ಪರ ಹೆಣಗಾಟ, ಸೆಣಸಾಟ. ಪಟ್ಟಿಗೆ ಪ್ರತಿ ಪಟ್ಟು. ಗೆಲುವಿನ ನಗೆ ಬೀರಿದ ಒಬ್ಬ ಪಟು, ಸೋತರೂ ಪ್ರೀತಿಯಿಂದಲೇ ಸೋಲನ್ನು ಸ್ವೀಕರಿಸಿ ನಡೆದ ಮತ್ತೊಬ್ಬ ಪಟು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ