ಬಗೆಹರಿದ ದಶಕದ ವಿವಿ ಭೂ ವಿವಾದ

ಚೀ. ಜ. ರಾಜೀವ ಮೈಸೂರು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯಕ್ಕೆ  ಮಾನಸಗಂಗೋತ್ರಿಯಲ್ಲಿರುವ  ೧೫ ಎಕರೆ  ಭೂಮಿಯನ್ನು ಮೈಸೂರು ವಿವಿ ಬಿಟ್ಟು ಕೊಟ್ಟಿದೆ. ಇದರೊಂದಿಗೆ  ಸಾಂಸ್ಕೃತಿಕ ನಗರಿ ಮೈಸೂರಿನ ಎರಡು ವಿವಿಗಳ ನಡುವೆ  ದಶಕದಿಂದ ನಡೆಯುತ್ತಿದ್ದ  `ಭೂ ವಿವಾದ' ಬಗೆಹರಿದಿದೆ.
ಉನ್ನತ ಶಿಕ್ಷಣ ಸಚಿವ ಡಾ. ವಿ. ಎಸ್. ಆಚಾರ್ಯ ಅವರ ಸಾಮರಸ್ಯ ಬೋಧನೆ, ಮೈಸೂರು ವಿವಿ ಕುಲಪತಿ ಪ್ರೊ.ವಿ.ಜಿ. ತಳವಾರ್ ಅವರ ಕಡೆ ಕ್ಷಣದ  ಉದಾರತೆ, ಮುಕ್ತ ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ದೀರ್ಘಕಾಲೀನ  ಜಾಣ್ಮೆ  ಹಾಗೂ  ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರ ಮಧ್ಯಸ್ಥಿಕೆಗಳು ಒಗ್ಗೂಡಿದ ಪರಿಣಾಮ ಸಮಸ್ಯೆ ಸೌಹಾರ್ದಯುತವಾಗಿ ಅಂತ್ಯ ಕಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ