ಬಡವರಿಗೆ ವರಮಾನ ಸಾಧಕರಿಗೆ ಸಮ್ಮಾನ

ಫ್ರೆಂಡ್ಲಿ `ಮ್ಯಾಚ್'...
ನಗರ ಪಾಲಿಕೆ ತೆರಿಗೆ ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್ ಮಂಡಿಸಿದ ಬಜೆಟ್‌ಗೆ ಆಡಳಿತ,ಪ್ರತಿಪಕ್ಷದ ಯಾರಿಂದಲೂ ಹೆಚ್ಚಿನ ಆಕ್ಷೇಪ ವ್ಯಕ್ತವಾಗಲಿಲ್ಲ. ಕಾರಣ, ಪಾಲಿಕೆಯಲ್ಲಿ ತಾಂತ್ರಿಕವಾಗಿ ಬಿಜೆಪಿ ಪ್ರತಿಪಕ್ಷ. ಸದಸ್ಯ ಬಾಹುಳ್ಯದ ಮೇಲೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಿಗಿದೆ. ಶಿವಕುಮಾರ್ ಆ ಪಕ್ಷದ ಸದಸ್ಯರಾಗಿದ್ದರಿಂದ ಟೀಕೆಯನ್ನು ನಿರೀಕ್ಷಿಸುವಂತಿಲ್ಲ. ಮೇಯರ್ ಸಂದೇಶ್ ಸ್ವಾಮಿ ಜಾ.ದಳ ಸದಸ್ಯ.ಉಪಮೇಯರ್ ಪುಷ್ಪಲತಾ ಕಾಂಗ್ರೆಸ್. ಈ ಕಾರಣ ಯಾರಿಗೂ ಟೀಕಿಸುವ `ಅವಕಾಶ 'ಇಲ್ಲ. ಟೀಕಿಸಿದರೆ ತಮ್ಮನ್ನು ತಾವೇ ಟೀಕಿಸಿಕೊಂಡಂತೆ. ಪರಿಣಾಮ, ಬಜೆಟ್ ಎಲ್ಲರಿಗೂ `ಅನಿವಾರ್‍ಯ ಅಮೃತ'. ಒಂದರ್ಥದಲ್ಲಿ, ಫ್ರೆಂಡ್ಲಿ ಮ್ಯಾಚ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ