ಪ್ರಸಾದದಂತೆ ಗುತ್ತಿಗೆ ಹಂಚಿಕೆ, ಕಳಪೆಯಾದ ಗುಣಮಟ್ಟ

ಮಡಹಳ್ಳಿ ಮಹೇಶ್ ಗುಂಡ್ಲುಪೇಟೆ
ಒಳಚರಂಡಿ ನಿರ್ಮಾಣ ಕಾಮಗಾರಿ ಪರಿಣಾಮ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳು ಹಾಳಾಗಿವೆ. ಗುಂಡ್ಲುಪೇಟೆಯ ಮುಖ್ಯ ರಸ್ತೆಗಳನ್ನು ಹೊರತು ಪಡಿಸಿ ಉಳಿದವುಗಳಲ್ಲಿ ಗುಂಡಿ ನಡುವೆ ರಸ್ತೆ ಹುಡುಕುವ ಸ್ಥಿತಿ. ರಸ್ತೆಗಳ ವಿಚಾರದಲ್ಲಿ  ಪುರಸಭೆ ನಿದ್ರೆಗೆ ಜಾರಿದೆ. ಹೀಗಾಗಿ ಹದಗೆಟ್ಟ ರಸ್ತೆಗಳದ್ದೇ ಕಾರುಬಾರು.
ಈಚೆಗೆ ನಿರ್ಮಿಸಿದ್ದ ಡಾಂಬರು ಹಾಗೂ ಮೆಟ್ಲಿಂಗ್ ರಸ್ತೆಗಳನ್ನು ಒಳ ಚರಂಡಿ ನಿರ್ಮಾಣಕ್ಕಾಗಿ ಅಗೆಯಲಾಗಿದೆ. ಮ್ಯಾನ್ ಹೋಲ್‌ಗಳು ರಸ್ತೆಗಿಂತ ಎತ್ತರವಾಗಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿವೆ.  ಇದರಿಂದ ವಾಹನ ಸಂಚಾರ ಪಟ್ಟಣದಲ್ಲಿ ತ್ರಾಸದಾಯಕ. ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾದ ಹಣ ಜಲ್ಲಿ ಕಲ್ಲಿನಡಿ ಹೂತು ಹೋಗಿದೆ. 
ರಸ್ತೆ ಕಾಮಗಾರಿಗಳ ಗುತ್ತಿಗೆಯನ್ನು `ಪ್ರಸಾದ' ಹಂಚಿದಂತೆ ಹಂಚಿದ ಪರಿಣಾಮ ಗುಣಮಟ್ಟವೂ ಅವಿತುಕೊಂಡಿದೆ. ಮಳೆ ಬಿದ್ದ ವೇಳೆಯಲ್ಲಂತೂ ಕಾಮಗಾರಿ ಬಂಡವಾಳ ಎಲ್ಲರಿಗೂ ರಾಚುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ