ಮೈಸೂರು ಜೈಲಿನಲ್ಲಿ ಗುಂಡಿನ ಸದ್ದು

ವಿಕ ಸುದ್ದಿಲೋಕ ಮೈಸೂರು
ನಗರ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬ ಗುಂಡಿನ  ಸದ್ದು ಮೊಳಗಿಸಿದ್ದು,ಸಹ ಕೈದಿಯ ಕೊಲೆಗೆ ಯತ್ನಿಸಿದ್ದಾನೆ.
ಸದಾ ಪೊಲೀಸ್ ಕಣ್ಗಾವಲಿರುವ ಕಾರಾಗೃಹದಲ್ಲಿ ಗುರುವಾರ ಮಧ್ಯಾಹ್ನ ಕೈದಿ ಬಾಲಾಜಿರಾವ್ ಅಲಿಯಾಸ್ ಟಿಬೆಟ್,ನೆಲಮಂಗಲದ ಬೆತ್ತನಗೆರೆಯ ಶ್ರೀನಿವಾಸ ಅಲಿಯಾಸ್ ಸೀನನ ಮೇಲೆ ನಾಡ ಪಿಸ್ತೂಲಿನಿಂದ ಗುಂಡು ಹಾರಿಸಿದ್ದು,ಗಾಯಗೊಂಡ ಸೀನನನ್ನು ಕೆ.ಆರ್.ಆಸ್ಪತ್ರೆಗೆ  ದಾಖಲಿಸಲಾಗಿದೆ.
ಸೀನನ ದಾಯಾದಿಯಿಂದ `ಸುಪಾರಿ' ಪಡೆದು ಬಾಲಾಜಿ ಈ ಕೃತ್ಯ ನಡೆಸಿದ್ದಾನೆ  ಎಂದು ಹೇಳಲಾಗಿದೆ. ಹಲವು ಸುತ್ತಿನ ತಪಾಸಣೆ ಮೂಲಕವೇ ಎಲ್ಲರನ್ನೂ ಒಳ-ಹೊರ ಬಿಡುವ ಕಾರಾಗೃಹದೊಳಗೆ ಪಿಸ್ತೂಲು ನುಸುಳಿದ್ದಾದರೂ ಹೇಗೆ ಎಂಬುದು ಹಲವು ಅನುಮಾನಗಳನ್ನು ಮೂಡಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ