ಕಾಮನ ಬಿಲ್ಲಿನಂಥ ಕಲಾಕೃತಿಗಳು !

ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ  `ನವ ವರ್ಣಗಳು- ೯ ವಿ' ಆರಂಭವಾಗಿದೆ.
ಯುವ ಕಲಾವಿದರಾದ ಎಸ್. ಸಂದೀಪ್, ಕೆ. ನರೇಂದ್ರ, ಸಿ. ಕಿರಣ್, ಸಿ. ಸಂತೋಷ್, ಬಿ. ಎಚ್. ವಿಜಯಕುಮಾರ್, ಎಸ್. ಯೋಗೇಶ್, ಐ.ಟಿ. ಮೊಹಮ್ಮದ್ ಉನ್ಸಿ, ಸೂರಜ್ ಸ್ಟೀಫನ್ ಡಿಸೋಜಾ ಮತ್ತು ಜಿ. ಕಾರ್ತೀಕ ಅವರು ಒಂಬತ್ತು ಬಣ್ಣಗಳನ್ನು ಬಳಸಿಕೊಂಡು ಬಗೆ-ಬಗೆಯ ಚಿತ್ರಗಳನ್ನು  ಪ್ರದರ್ಶನಕ್ಕೆ ಇಟ್ಟಿದ್ದಾರೆ. 
ಪ್ರದರ್ಶನ ಉದ್ಘಾಟಿಸಿದ ಸಾಹಿತಿ ಡಾ. ಕಾಳೇಗೌಡ ನಾಗವಾರ- `ಕಲಾವಿದನ ಮನಸ್ಸು  ಮುಗ್ಧವಾಗಿದ್ದಾಗ, ಸಹಜವಾಗಿದ್ದಾಗ ಮಾತ್ರ ಶ್ರೇಷ್ಠ ಕಲಾಕೃತಿಗಳು ಸೃಷ್ಟಿಯಾಗಲು ಸಾಧ್ಯ' ಎಂದರು. ಈ ಚಿತ್ರಗಳಲ್ಲೂ  ಸಹಜತೆ -ಮುಗ್ಧತೆಯನ್ನು ಹುಡುಕಬಹುದು. ಮಾ. ೮ ರವರೆಗೆ ವೀಕ್ಷಣೆಗೆ ಮುಕ್ತ ಅವಕಾಶ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ