ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ `ನವ ವರ್ಣಗಳು- ೯ ವಿ' ಆರಂಭವಾಗಿದೆ.
ಯುವ ಕಲಾವಿದರಾದ ಎಸ್. ಸಂದೀಪ್, ಕೆ. ನರೇಂದ್ರ, ಸಿ. ಕಿರಣ್, ಸಿ. ಸಂತೋಷ್, ಬಿ. ಎಚ್. ವಿಜಯಕುಮಾರ್, ಎಸ್. ಯೋಗೇಶ್, ಐ.ಟಿ. ಮೊಹಮ್ಮದ್ ಉನ್ಸಿ, ಸೂರಜ್ ಸ್ಟೀಫನ್ ಡಿಸೋಜಾ ಮತ್ತು ಜಿ. ಕಾರ್ತೀಕ ಅವರು ಒಂಬತ್ತು ಬಣ್ಣಗಳನ್ನು ಬಳಸಿಕೊಂಡು ಬಗೆ-ಬಗೆಯ ಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.
ಪ್ರದರ್ಶನ ಉದ್ಘಾಟಿಸಿದ ಸಾಹಿತಿ ಡಾ. ಕಾಳೇಗೌಡ ನಾಗವಾರ- `ಕಲಾವಿದನ ಮನಸ್ಸು ಮುಗ್ಧವಾಗಿದ್ದಾಗ, ಸಹಜವಾಗಿದ್ದಾಗ ಮಾತ್ರ ಶ್ರೇಷ್ಠ ಕಲಾಕೃತಿಗಳು ಸೃಷ್ಟಿಯಾಗಲು ಸಾಧ್ಯ' ಎಂದರು. ಈ ಚಿತ್ರಗಳಲ್ಲೂ ಸಹಜತೆ -ಮುಗ್ಧತೆಯನ್ನು ಹುಡುಕಬಹುದು. ಮಾ. ೮ ರವರೆಗೆ ವೀಕ್ಷಣೆಗೆ ಮುಕ್ತ ಅವಕಾಶ.
ಯುವ ಕಲಾವಿದರಾದ ಎಸ್. ಸಂದೀಪ್, ಕೆ. ನರೇಂದ್ರ, ಸಿ. ಕಿರಣ್, ಸಿ. ಸಂತೋಷ್, ಬಿ. ಎಚ್. ವಿಜಯಕುಮಾರ್, ಎಸ್. ಯೋಗೇಶ್, ಐ.ಟಿ. ಮೊಹಮ್ಮದ್ ಉನ್ಸಿ, ಸೂರಜ್ ಸ್ಟೀಫನ್ ಡಿಸೋಜಾ ಮತ್ತು ಜಿ. ಕಾರ್ತೀಕ ಅವರು ಒಂಬತ್ತು ಬಣ್ಣಗಳನ್ನು ಬಳಸಿಕೊಂಡು ಬಗೆ-ಬಗೆಯ ಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.
ಪ್ರದರ್ಶನ ಉದ್ಘಾಟಿಸಿದ ಸಾಹಿತಿ ಡಾ. ಕಾಳೇಗೌಡ ನಾಗವಾರ- `ಕಲಾವಿದನ ಮನಸ್ಸು ಮುಗ್ಧವಾಗಿದ್ದಾಗ, ಸಹಜವಾಗಿದ್ದಾಗ ಮಾತ್ರ ಶ್ರೇಷ್ಠ ಕಲಾಕೃತಿಗಳು ಸೃಷ್ಟಿಯಾಗಲು ಸಾಧ್ಯ' ಎಂದರು. ಈ ಚಿತ್ರಗಳಲ್ಲೂ ಸಹಜತೆ -ಮುಗ್ಧತೆಯನ್ನು ಹುಡುಕಬಹುದು. ಮಾ. ೮ ರವರೆಗೆ ವೀಕ್ಷಣೆಗೆ ಮುಕ್ತ ಅವಕಾಶ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ