ವೈರಮುಡಿ ಉತ್ಸವಕ್ಕೆ ಕ್ಷಣಗಣನೆ

ವಿಕ ಸುದ್ದಿಲೋಕ ಮಂಡ್ಯ
ವಿಶ್ವವಿಖ್ಯಾತ  ಚಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು,ಮಾ.೧೫ರಂದು ನಡೆಯುವ ಉತ್ಸವಕ್ಕೆ ಮೇಲುಕೋಟೆ ಸಂಪೂರ್ಣ ಸಜ್ಜಾಗಿದೆ.
ಎರಡು ದಿನ ನಡೆಯುವ ಜಾನಪದ ಮತ್ತು ಶಾಸ್ತ್ರೀಯ ಸಂಭ್ರಮ,ವೈವಿಧ್ಯಮಯ ವಿದ್ಯುತ್ ದೀಪಾಲಂಕಾರ ಕಾರ್‍ಯಕ್ರಮಕ್ಕೆ ಸೋಮವಾರ ಸಂಜೆ ಚಾಲನೆ ನೀಡಲಾಯಿತು.ವಿಶೇಷ ವಿದ್ಯುತ್ ದೀಪಗಳಿಂದ ಇಡೀ ಮೇಲುಕೋಟೆ ಝಗಮಗಿಸುತ್ತಿದೆ.
ದಿನದ ೨೪ ಗಂಟೆಯೂ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಭಕ್ತರಿಗೆ ನಲ್ಲಿ, ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಂಪರ್ಕ ಕಲ್ಪಿಸುವ ಮತ್ತು ಗ್ರಾಮದೊಳಗಿನ ರಸ್ತೆಗಳು ದುರಸ್ತಿ ಕಂಡಿವೆ.ವಿದ್ಯುತ್ ದೀಪಾಲಂಕಾರ,ತಳಿರು, ತೋರಣಗಳಿಂದ ಊರು ಸಿಂಗಾರಗೊಂಡಿದೆ.
ಪಂಚಕಲ್ಯಾಣಿ, ಭುವನೇಶ್ವರಿ ಮಂಟಪ, ಅಕ್ಕ-ತಂಗಿಯರ ಕೊಳ, ರಾಯರಗೋಪುರ ಹಾಗೂ ಇತರ ಸ್ಮಾರಕಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.ಆಗಮಿಸುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ವಿಧೆಡೆ ೧೦೦ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ