ಕೈದಿ ಸಿಡಿಸಿದ್ದು ಪೊಲೀಸ್ ಗುಂಡು!

* ಕುಂದೂರು ಉಮೇಶ ಭಟ್ಟ ಮೈಸೂರು
ಪೊಲೀಸರು ಬಳಸುವ ಗುಂಡುಗಳು ಗೂಂಡಾಗಳಿಗೆ ಸಿಕ್ಕಿದ್ದಾದರೂ ಹೇಗೆ?
ಮೈಸೂರು ಕಾರಾಗೃಹ ಆವರಣದಲ್ಲಿ ನಡೆದ ರೌಡಿಗಳ ಗುಂಡಿನ ಕಾಳಗದ ವೇಳೆ ಬಳಸಿದ ರಿವಾಲ್ವರ್ ಹಾಗೂ ಗುಂಡುಗಳ ಕುರಿತು ಇಂಥದೊಂದು ಪ್ರಶ್ನೆ ಉದ್ಭವಿಸಿದ್ದು, ಪೊಲೀಸ್ ತನಿಖೆ ಚುರುಕು ಗೊಂಡಿದೆ.
ತಾವು ಬಳಸುವ, ಅದರಲ್ಲೂ ಇತರರಿಗೆ ನಿಷೇತ ಗುಂಡು ಗಳು ರೌಡಿಗಳ ಕೈಯಿಂದ ಹೇಗೆ ಬಂದಿತು ಎನ್ನುವುದು ಕುತೂಹಲಕ್ಕೆ ಕಾರಣ.ಬೆಂಗಳೂರಿನ  ಪ್ರೇಮ್ ಎಂಬಾತ ರಿವಾಲ್ವರ್ ನೀಡಿರುವ ಅಂಶ ಬಯಲಿಗೆ ಬಂದಿದ್ದು,ಆತನ ಬಗ್ಗೆ ಮಾಹಿತಿ ಕಲೆ ಹಾಕಲು ಪೊಲೀಸ್ ತಂಡ ತೆರಳಿದೆ.ಕಾರಾಗೃಹ ಇಲಾಖೆಯ ಸ್ಥಳೀಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವೈಫಲ್ಯದ ಕುರಿತು ವಿಚಾರಣೆ ನಡೆಯುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ