ಹಿರೋಡೆಕೆರೆ ವಿನಾಶದ ಅಂಚಿಗೆ

ರಘುವೀರ್ ಪಾಂಡವಪುರ
ಪಟ್ಟಣಕ್ಕೆ ಹೊಂದಿಕೊಂಡಂತೆ ನೂರಾರು ಎಕರೆ ವಿಸ್ತೀರ್ಣದಲ್ಲಿರುವ ಹಿರೋಡೆಕೆರೆ ವಿನಾಶದ ಅಂಚಿಗೆ ತಲುಪಿದೆ. ಶಿಥಿಲಾವಸ್ಥೆಗೆ ತಲುಪಿರುವ ಕೆರೆಯ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ.
೮೫೦ ವರ್ಷದ ಹಿಂದೆ ೮೫೦ ಎಕರೆ ವಿಸ್ತೀರ್ಣದಲ್ಲಿ ಕೆರೆಯನ್ನು ನಿರ್ಮಿಸಲಾಗಿತ್ತು. ಇದೀಗ ಸುತ್ತಲೂ ಒತ್ತುವರಿಯಾಗಿ ೨೦೦ ಎಕರೆ ಯಷ್ಟು ಪ್ರದೇಶದಲ್ಲಿ ಕೆರೆ ಉಳಿದಿದೆ. ಕೋಡಿ ಮತ್ತು ಏರಿ ಶಿಥಿಲ ಗೊಂಡು ವರ್ಷಗಳೇ ಉರುಳಿದ್ದರೂ ಅಭಿವೃದ್ಧಿ ಪಡಿಸಲಾಗಿಲ್ಲ.
ತೊಣ್ಣೂರು ಕೆರೆಯ ನಾಲೆ ಮತ್ತು ವಿ.ಸಿ.ನಾಲೆ ಸೋರಿಕೆ ನೀರನ್ನು  ಹಿರೋಡೆ ಕೆರೆ ಆಶ್ರಯಿಸಿದೆ.  ದೇವೇಗೌಡನಕೊಪ್ಪಲು, ಚಿಕ್ಕಾಡೆ, ಪಟ್ಟಸೋಮನಹಳ್ಳಿ ಸುತ್ತಮುತ್ತಲ ಸುಮಾರು ೭೫೦ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದೆ.
ಈ ಕೆರೆಯನ್ನು ಕುಂತಿ ಕೆರೆ ಎಂದು ಕರೆಯುವುದೂ ಉಂಟು. ಇತ್ತೀಚಿನ ವರ್ಷಗಳಲ್ಲಿ ಇದಕ್ಕೆ ಹಿರೋಡೆಕೆರೆ ಎನ್ನುವ ನಾಮಕರಣ ವಾಗಿದೆ. ಕೆರೆಯು ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಒಳಪಟ್ಟಿದೆ.
ಶಿಥಿಲಾವಸ್ಥೆ: ವಿಶ್ವೇಶ್ವರಯ್ಯ ನಾಲೆ ಮತ್ತು ತೊಣ್ಣೂರು ಕೆರೆ ನಾಲೆ ಗಳಲ್ಲಿ ನೀರು ಹರಿಯುವಾಗಲೆಲ್ಲಾ ಈ ಕೆರೆ ತುಂಬಿ ತುಳುಕುತ್ತಿರು ತ್ತದೆ. ಬೇಸಿಗೆಯಲ್ಲೂ ನೀರು ತುಂಬಿರುವುದು ಕೆರೆಯ ಮತ್ತೊಂದು ವಿಶೇಷವಾಗಿದೆ.
ಕೆರೆಯ ಏರಿ ಮತ್ತು ಕೋಡಿಯು ಇಂದೋ ನಾಳೆಯೋ ಒಡೆದು ಹೋಗುವಂಥ ಸ್ಥಿತಿಗೆ ತಲುಪಿದೆ. ಶಿಥಿಲಗೊಂಡಿರುವ ಕೆರೆಯ ಕೋಡಿ ಮತ್ತು ಏರಿಯನ್ನು ಅಭಿವೃದ್ಧಿಪಡಿಸಬೇಕೆಂದು ಅಚ್ಚುಕಟ್ಟು ಪ್ರದೇಶದ ರೈತರು ಸಾಕಷ್ಟು ಬಾರಿ ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ.
ಕಾವೇರಿ ನೀರಾವರಿ ನಿಗಮದಿಂದ ೨೦೦೪ರಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿ ಕೆರೆ ಏರಿಯನ್ನು ದುರಸ್ತಿಪಡಿಸಲಾಗಿತ್ತು. ದುರಸ್ತಿ ಆಗಿ ರುವ ಕಡೆಯೇ ಏರಿ ಬಿರುಕು ಬಿಟ್ಟಿರುವುದು ಕಳಪೆ ಕಾಮಗಾರಿಗೆ ಕೈಗನ್ನಡಿಯಾಗಿದೆ. ಅಲ್ಲೀಗ ಮರಳು ಮೂಟೆಗಳನ್ನಿಟ್ಟು ತೇಪೆ ಕೆಲಸ ಮಾಡಲಾಗಿದೆ. 
ತೆರವಿಗೆ ಕ್ರಮವಿಲ್ಲ: ಮಂಡ್ಯ ಜಿಲ್ಲಾಡಳಿತವು ಜಿಲ್ಲಾದ್ಯಂತ ಒತ್ತುವರಿ ತೆರವು ಕಾರ್ಯಾಚರಣೆಯನ್ನು ವರ್ಷದ ಹಿಂದೆ ಪ್ರಾರಂಭಿಸಿದೆ. ಅಲ್ಲಲ್ಲಿ ರಸ್ತೆ ಮತ್ತು ಕೆರೆ-ಕಟ್ಟೆಗಳ ಒತ್ತುವರಿಯೂ ತೆರವಾಗಿದೆ. ಆದರೆ, ಇಂಥದ್ದೊಂದು ಐತಿಹಾಸಿಕ ಕೆರೆ ಒತ್ತುವರಿ ತೆರವಿಗೆ ಕ್ರಮ ಕೈಗೊಂಡಿಲ್ಲ. ಸುಮಾರು ೧೫೦ ಎಕರೆಯಷ್ಟು ಕೆರೆ ಪ್ರದೇಶ ಒತ್ತುವರಿ ಯಾಗಿದೆ. ಕೆರೆಯ ಆಸುಪಾಸಿನಲ್ಲಿ ಹತ್ತಿಪ್ಪತ್ತು ಗುಂಟೆ ಜಮೀನು ಹೊಂದಿದ್ದವ ರೆಲ್ಲಾ ಎಕರೆ ಗಟ್ಟಲೆ ವಿಸ್ತೀರ್ಣವನ್ನು ವ್ಯಾಪಿಸಿಕೊಂಡು, ಬೇಸಾಯ ಮಾಡುತ್ತಿದ್ದಾರೆ.
ಒತ್ತುವರಿ ಪ್ರದೇಶಕ್ಕೆ ಕೆರೆಯಿಂದಲೇ ಮಣ್ಣು ಹಾಕಿ ಎತ್ತರಿಸಿಕೊಳ್ಳ ಲಾಗಿದೆ. ಇದೀಗ ಕೆರೆಯಲ್ಲಿ ನೀರು ಶೇಖರಣೆ ಸಾಮಾರ್ಥ್ಯ ಕೂಡಾ ಕುಗ್ಗಿದೆ. ಆ ಕಾರಣ ಬೇಸಿಗೆಯಲ್ಲಿ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ.
ಅನುದಾನಕ್ಕೆ ತಡೆ: ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಗಳ ಅಭಿವೃದ್ಧಿ ಯೋಜನೆಯಡಿ ಪಾಂಡವಪುರಕ್ಕೆ ೫ ಕೋಟಿ ರೂ. ಬಿಡುಗಡೆಯಾಗಿದೆ. ಈ ಪೈಕಿ ಹಿರೋಡೆ ಕೆರೆ ಅಭಿವೃದ್ಧಿಗೆ ೫೦ ಲಕ್ಷ ರೂ. ನಿಗದಿಪಡಿಸಲಾಗಿತ್ತು.
ಅನುದಾನವನ್ನು ಕೆರೆ ಅಭಿವೃದ್ಧಿಗೆ ಬಳಸಲು ಶಾಸಕ ಸಿ.ಎಸ್. ಪುಟ್ಟ ರಾಜು ಶಿಫಾರಸು ಮಾಡಿದ್ದರು. ಆದರೆ, ಯೋಜನೆ ಅನುದಾನ ವನ್ನು ಸಂಪೂರ್ಣವಾಗಿ ಪಟ್ಟಣದ ಅಭಿವೃದ್ಧಿಗೆ ಬಳಸಬೇಕು. ಕೆರೆ ಅಭಿವೃದ್ಧಿ ಬೇಡ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಮುಂಖಡರು ಹೋರಾಟ ನಡೆಸಿದರು.
ಅನುದಾನ ಬಳಕೆಗೆ ವಿರೋಧ ಎದುರಾದ ಹಿನ್ನೆಲೆಯಲ್ಲಿ ಕೆರೆ ಅಭಿವೃದ್ಧಿಯನ್ನು ಉಪ ವಿಭಾಗಾಧಿಕಾರಿ ತಡೆ ಹಿಡಿದಿದ್ದಾರೆ.  ಈ ಸಂಬಂಧ ಕರೆದಿದ್ದ ಟೆಂಡರ್ ಪ್ರಕ್ರಿಯೆಯೂ ಸ್ಥಗಿತಗೊಂಡಿದೆ. ರಾಜಕೀಯ ರಂಪಾಟದಿಂದ ಕೆರೆ ಅಭಿವೃದ್ಧಿ ಕುಂಟಿತವಾಗಿದೆ.
ವಿಹಾರ ತಾಣವಾಗಿಸಲಿ: ಹಿರೋಡೆ ಕೆರೆಯು ಪಾಂಡವಪುರ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವುದರಿಂದ ಅದನ್ನು ವಿಹಾರ ತಾಣವನ್ನಾಗಿ ಸಲು ಯೋಜನೆ ರೂಪಿಸಬೇಕೆನ್ನುವ ಕೂಗು ಕೇಳಿ ಬಂದಿದೆ.
ಕೆರೆಯ ಒತ್ತುವರಿಯನ್ನು ಸಂಪೂರ್ಣ ತೆರವುಗೊಳಿಸಿ ಅಭಿ ವೃದ್ಧಿಪಡಿಸಿದ ನಂತರ ದೋಣಿ ವಿಹಾರ ಮತ್ತಿತರೆ ಸೌಲಭ್ಯಗಳನ್ನು ಕಲ್ಪಿಸಿದಲ್ಲಿ ಪಟ್ಟಣ ಸುತ್ತಮುತ್ತಲ ಮಕ್ಕಳು, ಸಾರ್ವಜನಿಕರನ್ನು ಇಲ್ಲಿಗೆ ಸೆಳೆಯಬಹುದಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ