ವಿಕ ತಂಡ ಚಾಮರಾಜನಗರ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಎನ್ಆರ್ಇಜಿಎ) ಜಿಲ್ಲೆಯ ಮಟ್ಟಿಗೆ ‘ಖಾತರಿ’ ಕಳೆದುಕೊಂಡಿದೆ.
ಉದ್ಯೋಗ ಅರಸಿ ವಲಸೆ ಹೋಗುವ ಕಾರ್ಮಿಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಜಿಲ್ಲೆಯಾದ್ಯಂತ ಈ ಉಪಯುಕ್ತ ಯೋಜನೆ ಕಾಟಾಚಾರಕ್ಕೆಂಬಂತೆ ನಡೆಯುತ್ತಿದ್ಧು, ‘ಭರವಸೆ ’ ಕಳೆದುಕೊಳ್ಳುತ್ತಿದೆ.
ಈ ಯೋಜನೆಯಡಿ ಕಾಮಗಾರಿ ನಡೆಸಿದರೆ ಅಧಿಕಾರಿ ವರ್ಗಕ್ಕಾಗಲಿ, ಜನಪ್ರತಿನಿಧಿಗಳಿಗಾಗಲಿ ಒಂದು ಪೈಸೆ ’ಗಿಟ್ಟುವುದಿಲ್ಲ’ ಈ ಕಾರಣಕ್ಕಾಗಿಯೇ ಯೋಜನೆ ಹಾದಿ ತಪ್ಪಿದೆ. ಉದ್ಯೋಗ ಖಾತ್ರಿ ಅನುಷ್ಠಾನದ ವಿಚಾರದಲ್ಲಿ ರಾಜ್ಯಕ್ಕೆ ಹಿಂದುಳಿದ ಗಡಿ ಜಿಲ್ಲೆಗೆ ೨೪ನೇ ಸ್ಥಾನ !
ಈ ಸ್ಥಾನದ ಮೂಲಕವೇ ನಮ್ಮ ಆಡಳಿತ ವರ್ಗಕ್ಕೆ ಅಭಿವೃದ್ಧಿ ಬಗೆಗೆ ಇರುವ ಕಾಳಜಿ ಎಷ್ಟು ಎಂಬುದನ್ನು ಅಳೆಯಬಹುದು. ಒಂದೆಡೆ ಕಾರ್ಮಿಕರಿಗೆ ಕೆಲಸ, ಮತ್ತೊಂದೆಡೆ ಊರುಗಳ ಅಭಿವೃದ್ಧಿ. ಇಷ್ಟು ಅದ್ಬುತವಾಗಿರುವ ಯೋಜನೆಯನ್ನು ಸದ್ಬಳಕೆ ಮಾಡಿ ಕೊಳ್ಳುವಲ್ಲಿ ಜಿಲ್ಲೆ ತೀರ ಹಿಂದೆ ಬಿದ್ದಿದೆ.
ಹೆಚ್ಚಿಗೆ ಬಳಕೆಯಾಗಬೇಕಿತ್ತು: ಜಿಲ್ಲೆಯಲ್ಲಿ ಹೇಳಿಕೊಳ್ಳುವಂಥ ಯಾವುದೇ ಕೈಗಾರಿಕೆಗಳಿಲ್ಲ. ಕೃಷಿ ಅವಲಂಬಿತರೇ ಹೆಚ್ಚು. ಆದರೆ ಮಳೆ ಕೈಕೊಟ್ಟ ಕಾರಣ ರೈತರು ಹಾಗೂ ರೈತ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ವೇಳೆಯಲ್ಲಿ ಎನ್ಆರ್ಇಜಿಎ ವರವಾಗಿ ಪರಿಣಮಿಸಬೇಕಾಗಿತ್ತು. ಅನುಷ್ಠಾನದ ವಿಚಾರದಲ್ಲಿ ಮೊದಲ ಸ್ಥಾನ ಪಡೆಯಬೇಕಿತ್ತು.
ಆದರೆ ಇದರಲ್ಲಿ ‘ನುಂಗಲು’ ಯಾವುದೇ ಮಾರ್ಗವಿಲ್ಲ ಎಂಬ ಒಂದೇ ಕಾರಣಕ್ಕೆ ಬಹುತೇಕ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಯೋಜನೆ ಬಗ್ಗೆ ನಿರಾಸಕ್ತಿ. ಎನ್ಆರ್ಇಜಿಎ ಬಹುತೇಕ ಎಲ್ಲ ಇಲಾಖೆಗಳ ವ್ಯಾಪ್ತಿಗೂ ಬರುತ್ತದೆ. ಇದಕ್ಕೆ ಅನುದಾನದ ಮಿತಿ ಇಲ್ಲ. ಎಷ್ಟೇ ಮೊತ್ತಕ್ಕೆ ಕ್ರಿಯಾ ಯೋಜನೆ ತಯಾರಿಸಿದರೂ ಅಷ್ಟು ಅನುದಾನ ಸಿದ್ಧ ಇರುತ್ತದೆ. ಹೀಗಿದ್ದರೂ ಸಂಬಂಧಪಟ್ಟ ಯಾವ ಇಲಾಖೆಯೂ ಶೇ. ೨೫ ರಷ್ಟು ಗುರಿಯನ್ನೂ ಮುಟ್ಟಿಲ್ಲ.
ತಪ್ಪದ ಕಾರ್ಮಿಕರ ವಲಸೆ: ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗೇ ಉದ್ಯೋಗ ನೀಡಬೇಕು. ಆ ಮೂಲಕ ಆಯಾ ಪ್ರದೇಶದ ಅಭಿವೃದ್ಧಿಯೂ ಆಗಬೇಕು ಎಂಬುದು ಯೋಜನೆಯ ಉದ್ದೇಶ. ಆದರೆ ಯೋಜನೆ ಸಮರ್ಪಕವಾಗಿ ಜಾರಿಗೊಳ್ಳದ ಕಾರಣ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಗೆ ವಲಸೆ ಹೋಗುವ ಕಾರ್ಮಿಕರ ಸಂಖ್ಯೆಯನ್ನು ತಗ್ಗಿಸಲು ಸಹ ಯೋಜನೆ ಮುನ್ನೆಡೆಸುವ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ.
ಇಂದಿಗೂ ಚಾ.ನಗರದ ಹರವೆ ಹೋಬಳಿ, ಕೊಳ್ಳೇಗಾಲದ ಪಾಳ್ಯ, ಯಳಂದೂರು ತಾಲೂಕಿನ ಅಗರ ಹೋಬಳಿ ವ್ಯಾಪ್ತಿಯ ಗ್ರಾಮಗಳಿಂದ ಒಟ್ಟಾರೆ ಸಹಸ್ರಾರು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಕೊಡಗು, ತಮಿಳುನಾಡು ಹಾಗೂ ಜಿಲ್ಲೆಯಲ್ಲೇ ಇರುವ ಹತ್ತಿಖಾನೆ ಎಸ್ಟೆಟ್ಗಳಿಗೆ ವಲಸೆ ಹೋಗುತ್ತಾರೆ.
ಗುಂಡ್ಲುಪೇಟೆ ತಾಲೂಕಿನ ಚೆನ್ನಮಲ್ಲಿಪುರ, ಬೇರಂಬಾಡಿ, ಕಗ್ಗಲದಹುಂಡಿ, ಕಣ್ಣೇಗಾಲ, ಕುಂದುಕೆರೆ ಗ್ರಾಮಗಳಿಂದಲೂ ಗುಂಪು, ಗುಂಪಾಗಿ ತಿಂಗಳುಗಟ್ಟಲೆ ವಲಸೆ ಹೋಗಿದ್ದಾರೆ. ಹೋಗುತ್ತಲೇ ಇದ್ದಾರೆ. ಇದು ಆ ಪೋಷಕರ ಮಕ್ಕಳ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತಿದೆ ಎಂಬುದು ಗಮನಾರ್ಹ ಅಂಶ.
ಗುರಿಯಿಂದ ದೂರವೇ ದೂರ: ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ ೧೦೪ ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪೈಕಿ ೬೮ ಕೋಟಿ ರೂ. ಅನ್ನು ಖರ್ಚು ಮಾಡಲು ನಿಗದಿಗೊಳಿಸಲಾಗಿದೆ. ಆದರೆ ಈಗ ಖರ್ಚಾಗಿರುವ ಮೊತ್ತ ಕೇವಲ ೧೨ ಕೋಟಿ. ಜಿಲ್ಲೆಯಲ್ಲಿ ಒಟ್ಟು ೧.೧೦ ಲಕ್ಷ ಕುಟುಂಬಗಳು ಉದ್ಯೋಗ ಅರಸಿ ಹೆಸರು ನೋಂದಾಯಿಸಿಕೊಂಡಿವೆ. ಆದರೆ ಈವರೆಗೆ ಕೆಲಸ ಕೊಟ್ಟಿರುವುದು ೨೫ ಸಾವಿರ ಕುಟುಂಬಕ್ಕೆ. ಅದರಲ್ಲೂ ಇಡೀ ನೂರು ದಿನ ಕೆಲಸ ಮಾಡಿರುವ ಕುಟುಂಬಗಳ ಸಂಖ್ಯೆ ಕೇವಲ ೬೮೦.
ಜಿಲ್ಲೆಯ ೧೨೦ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಉದ್ಯೋಗ ಖಾತ್ರಿ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಆದರೆ ಈ ಬಗ್ಗೆ ನಿರ್ಲಕ್ಷ್ಯ ಮಾಡಿದ್ದಕ್ಕಾಗಿ ಕೊಳ್ಳೇಗಾಲ ತಾಲೂಕು ಸಿದ್ದಯ್ಯನಪುರ ಗ್ರಾ.ಪಂ. ಕಾರ್ಯದರ್ಶಿ ಚಂದ್ರು, ಮಹಾದೇಶ್ವರಬೆಟ್ಟದ ಶಿವಲಿಂಗಯ್ಯ ಹಾಗೂ ಚಾ.ನಗರ ತಾಲೂಕು ಬಿಸಲವಾಡಿ ಗ್ರಾ.ಪಂ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ