ಮೊಸಳೆ ಸಂತಾನ ‘ಹರಣ’

ವಿಕ ಸುದ್ದಿಲೋಕ ಮೈಸೂರು
‘ಆತುರಗೆಟ್ಟ’ ಜನರ ಅನಗತ್ಯ ಆತಂಕದಿಂದ ಮೊಸಳೆ ಸಂತಾನ ವೃದ್ಧಿಗೆ ಕಂಟಕ !
ಹೌದು,ಕುಕ್ಕರಹಳ್ಳಿ ಕೆರೆ ಅಂಗಳದಲ್ಲಿ ಹಲವು ‘ಮೊಸಳೆ ’ಗಳು ಮೊಟ್ಟೆಯಿಂದ ಹೊರ ಬರುವ ಮೊದಲೇ ಮಣ್ಣು ಪಾಲಾಗಿವೆ. ಕಳೆದ ವಾರ ಕೆರೆ ಅಂಗಳದಲ್ಲಿ ವಾಯು ವಿಹಾರಿಗಳು ‘ಸೃಷ್ಟಿಸಿದ’ ಆತಂಕದ ‘ಗಾಳಿ’ ಇದಕ್ಕೆ ಕಾರಣ.
ಸೋಮವಾರ ಮತ್ತು ಮಂಗಳ ವಾರ ಕೆರೆ ಅಂಗಳದಲ್ಲಿ ಏಳೆಂಟು ಮೊಟ್ಟೆಗಳು ಒಡೆದ ಸ್ಥಿತಿಯಲ್ಲಿ ಕಾಣಿಸಿವೆ. ಇನ್ನೂ ಹಲವು ಮಣ್ಣಿನೊಳಗೆ ಇರುವ  ಸಾಧ್ಯತೆಯೂ ಇದೆ. ಕಳೆದ ಗುರು ವಾರ ಬೆಳಗ್ಗೆ ಕಾಣಿಸಿಕೊಂಡಿದ್ದ ಮೊಸಳೆ ಮೊಟ್ಟೆ  ಇಡಲು ದಂಡೆಗೆ ಬಂದಿತ್ತು ಎನ್ನುವುದು ಇದರಿಂದ ಖಚಿತವಾಗಿದೆ.
ಉಪಟಳ: ಮೊಟ್ಟೆ ಇಟ್ಟು, ತನ್ನ ಪಾಡಿಗೆ ಮಲಗಿದ್ದ ಮೊಸಳೆಯನ್ನು ಕಂಡ ಬೆಳಗಿನ ವಾಯು ವಿಹಾರಿಗಳು ‘ಪ್ರಾಣವೇ ಹೋದಂತೆ ’ವರ್ತಿಸುವ ಮೂಲಕ ಅದರ ಸಂತಾನಕ್ಕೆ ಸಂಚಕಾರ ತಂದಿದ್ದಾರೆ. ಕುತೂಹಲಿ ಜನ ಮತ್ತು ಕಿಡಿಗೇಡಿಗಳ  ೨ ತಾಸಿನ ‘ಉಪಟಳ ’ದ ನಂತರ ಕೆರೆಯ ನೀರಿಗೆ ಮರಳಿದ್ದ ಮೊಸಳೆ ಮತ್ತೆ ಮೇಲೆ ಬರುವ ಧೈರ್ಯ ತೋರಿದಂತಿಲ್ಲ.
ಬೇಲಿ,ರಕ್ಷಣೆ: ಅದಾಗಿ ಮೂರು ದಿನಕ್ಕೆ, ಈ ಪ್ರದೇಶದಲ್ಲಿ ಏಳೆಂಟು ಮೊಟ್ಟೆಗಳು ಒಡೆದ ಸ್ಥಿತಿಯಲ್ಲಿ ಗೋಚರಿಸಿವೆ.ವಾಸನೆ ಹಿಡಿದ ಮುಂಗುಸಿಗಳು ಮಣ್ಣಿನಿಂದ ಕೆಲ ಮೊಟ್ಟೆಗಳನ್ನು ಹೊರಗೆಳೆದು ತಿಂದಿರಬಹುದು ಎನ್ನಲಾಗಿದೆ.  ಎಚ್ಚೆತ್ತ ಮೈಸೂರು ವಿವಿ ಆಡಳಿತ,‘ಮೊಸಳೆ ಜಾಡಿನ ’ಸುತ್ತ ತಂತಿ ಬೇಲಿ ನಿರ್ಮಿಸಿ ಉಳಿದ ಮೊಟ್ಟೆಗಳನ್ನು ಸಂರಕ್ಷಿ ಸುವ  ಪ್ರಯತ್ನ ಆರಂಭಿಸಿದೆ.
ನಿಗಾವಹಿಸುವಂತೆ,  ಹುಲ್ಲು ಕತ್ತರಿಸಲು ಕೆರೆಗೆ  ಇಳಿ ಯುವ ಜನರಿಗೆ ಎಚ್ಚರಿಕೆ ನೀಡುವಂತೆ ಕಾವಲು ಗಾರರಿಗೆ ನಿರ್ದೇಶನ  ನೀಡಲಾಗಿದೆ.
ಕೆರೆಯ ಸಮಗ್ರ ಅಭಿವೃದ್ಧಿ ಸಂದರ್ಭ ‘ಮೊಸಳೆ ಪಾರ್ಕ್’ ನಿರ್ಮಿಸುವ ಇಂಗಿತ ವನ್ನೂ ವಿವಿ ವ್ಯಕ್ತಪಡಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ