ಮೈಸೂರು-ಮಂಡ್ಯಕ್ಕೂ ವಿಸ್ತರಣೆ ಬಾಂಗ್ಲಾ ಯುವತಿಯರ ‘ಕಾರ್ಯಾ’ಚರಣೆ

ವಿಕ ಸುದ್ದಿಲೋಕ ಮೈಸೂರು
ಮೈಸೂರು-ಮಂಡ್ಯಕ್ಕೂ ವಿಸ್ತರಣೆಗೊಂಡಿದೆ ಬಾಂಗ್ಲಾ ಯುವತಿಯರ ವೇಶ್ಯಾವಾಟಿಕೆ ಜಾಲ. ಇದರೊಟ್ಟಿಗೆ ಬಡಾವಣೆಗಳ ಹೈಟೆಕ್ ಜಾಲಕ್ಕೂ ಬಿದ್ದಿಲ್ಲ ಬ್ರೇಕ್, ದೇಹ ಹಂಚಿಕೊಂಡವರಿಗಿಂತ ಮಧ್ಯವರ್ತಿಗಳಿಗೆ ಹಬ್ಬವೋ ಹಬ್ಬವೋ...!
ಪೊಲೀಸರ ಮೂಗಿನಡಿ ಯಲ್ಲೇ ವ್ಯವಹಾರ ನಡೆಯುತ್ತಿದ್ದರೂ ಆಗೊಮ್ಮೆ ಈಗೊಮ್ಮೆ ದಾಳಿ ಶಾಸ್ತ್ರ ನಡೆಯುತ್ತಿದೆಯೇ ಹೊರತು ಬಿಗಿ ಕ್ರಮ ಗಳಿಲ್ಲ. ಸುನೀಲ್ ಅಗರವಾಲ್ ಅವರು ಪೊಲೀಸ್ ಆಯುಕ್ತ ರಾಗಿ ಬಂದ ನಂತರ ಪೊಲೀಸಿಂಗ್‌ನಲ್ಲಿ ಬಿಗಿ ಕಂಡು ಬಂದರೂ ಅವರ ದೃಷ್ಟಿ ಈ ವಹಿವಾಟಿನತ್ತ ಬಿದ್ದಿಲ್ಲ.
ಗುತ್ತಿಗೆ ವ್ಯವಹಾರ: ಇದು ಗುತ್ತಿಗೆ ವ್ಯವಹಾರ. ಇಷ್ಟು ಅವಧಿಗೆ ಇಂತಿಷ್ಟು ಹಣವನ್ನು ಗುತ್ತಿಗೆ ರೂಪದಲ್ಲಿ ಯುವತಿಯರಿಗೆ ನೀಡಲಾಗುತ್ತದೆ. ೧೫ ದಿನದ ಹಿಂದೆ ಮೈಸೂರಿನಲ್ಲಿ ಸಿಕ್ಕಿ ಬಿದ್ದ ಬಾಂಗ್ಲಾದ ಯುವತಿ ಸುಮಯ್ಯಾ ಆಲಿ ಯಾಸ್ ಪ್ರಿಯಾಳ ಪ್ರಕರಣ ಇದನ್ನು ಬಹಿರಂಗ ಪಡಿಸಿದೆ. ಬಾಂಗ್ಲಾದೇಶದಲ್ಲಿ ಬಡತನದ ಬೇಗೆ ಯಲ್ಲಿ ಸಿಲುಕಿದ ಯುವತಿಯರಿಗೆ ಹಣದ ಆಮಿಷ ತೋರಿಸ ಲಾಗುತ್ತದೆ. ಭಾರತದಲ್ಲಿ ಉದ್ಯೋಗ ಕೊಡಿಸುವ ಭರ ವಸೆ ನೀಡಿ ಪಾಸ್‌ಪೋರ್ಟ್ ಅನ್ನು ಕೊಡಿಸಲಾಗುತ್ತದೆ.
ಕೆಲವರು ಪಾಸ್‌ಪೋರ್ಟ್ ಇಟ್ಟುಕೊಂಡೇ ಭಾರತ ಪ್ರವೇಶಿಸಿದರೆ ಇನ್ನು ಕೆಲವರು ಯಾವ ದಾಖಲೆಯೂ ಇಲ್ಲದೇ ಒಳ ನುಸುಳುತ್ತಾರೆ. ಅಲ್ಲಿಂದ ಅವರು ಪ್ರವೇಶ ಪಡೆಯುವುದೇ ಕೋಲ್ಕೊತಾಕ್ಕೆ. ಮುಂಗಡ ಹಣ ಪಡೆಯಲು ಪಾಸ್‌ಪೋರ್ಟ್ ಅನ್ನು ಅಡ ಇಡಬೇಕು. ಆಗ ಇವರ ದರ ನಿಗದಿ. ಜತೆಗೆ ಯಾವ ಊರಿನಲ್ಲಿ ಸೇವೆ ಎನ್ನುವುದನ್ನು ಸೂಚಿಸಲಾಗುತ್ತದೆ.
ಕೇವಲ ಪ್ರಮುಖ ನಗರಗಳಿಗೆ ಸೀಮಿತವಾಗಿದ್ದ ಈ ಚಟುವಟಿಕೆ ಮೈಸೂರಿನಂಥ ಸಾಂಸ್ಕೃತಿಕ ನಗರಕ್ಕೂ ವಿಸ್ತರಿಸಿದೆ. ೨ ವರ್ಷದಿಂದ ಈ ವ್ಯಾಪಾರ ಚಾಲ್ತಿ ಯಲ್ಲಿದೆ. ಕಷ್ಟದ ಮೂಟೆಗಳನ್ನು ಹೊತ್ತು ಮೈಸೂರಿಗೆ ಬಂದ ೩೦ಕ್ಕೂ ಹೆಚ್ಚು ಯುವತಿ ಯರು ಸಿಕ್ಕ ಅಲ್ಪ ಸ್ವಲ್ಪ ಹಣ ದಲ್ಲೇ ಬದುಕನ್ನು ದೂಡಿದರೆ, ಮಧ್ಯವರ್ತಿಗಳು ದುಂಡಗಾಗು ತ್ತಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಯಲ್ಲೂ ಬಾಂಗ್ಲಾ ಯುವತಿಯರು ವೇಶ್ಯಾವಾಟಿಕೆ ವೇಳೆ ಸಿಕ್ಕಿ ಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.
ಶಕ್ತಿಧಾಮದಲ್ಲಿ ಯುವತಿ: ೨ ವರ್ಷದ ಹಿಂದೆ ಮಂಡಿ ಠಾಣೆ ವ್ಯಾಪ್ತಿಯ ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಏಳು ಮಂದಿ ಬಾಂಗ್ಲಾ ಯುವತಿಯರು ಅಲ್ಲಿ ಸಿಕ್ಕಿ ಬಿದ್ದರು (ಕೇಸ್ ನಂ ೬/೦೮). ಆ ಪೈಕಿ ಒಬ್ಬಾಕೆ ಬಿಡುಗಡೆ ಯಾಗಿ ಈಗ ಮೈಸೂರಿನ ಶಕ್ತಿಧಾಮ ಸೇರಿದ್ದಾಳೆ. ಇನ್ನೂ ಆರು ಯುವತಿಯರು ಮೈಸೂರು ಜೈಲಿನಲ್ಲೇ ಇದ್ದಾರೆ. ಇನ್ನೂ ಕೆಲವರು ಭಯದ ಮಧ್ಯೆಯೇ ವಹಿವಾಟು ನಡೆಸಿದ್ದಾರೆ.
ಹೈಟೆಕ್ ಸೇವೆ: ಬಾಂಗ್ಲಾಯುವತಿಯರ ಕಥೆ ಬದುಕಿನದ್ದಾದರೂ ಹೈಟೆಕ್ ಸ್ವರೂಪದ್ದೇ. ಕುವೆಂಪುನಗರ, ವಿಜಯ ನಗರದಂಥ ಪ್ರತಿಷ್ಠಿತ ಬಡಾವಣೆಗಳಲ್ಲಿ ಇಂಥ ಹೈಟೆಕ್ ದಂಧೆ ಎಗ್ಗಿಲ್ಲದೇ ನಡೆದಿದೆ. ಕೆಲ ನಿಗದಿತ ವ್ಯಕ್ತಿಗಳು ಮನೆಗಳನ್ನು ಗುರುತಿಸಿಕೊಂಡು ಅವರೇ ಮಧ್ಯವರ್ತಿ ಗಳಾಗಿದ್ದಾರೆ. ವೈದ್ಯರ ರೀತಿ ಅಪಾಯಿಂಟ್‌ಮೆಂಟ್ ನಿಗದಿಪಡಿಸಿಕೊಡುತ್ತಾರೆ. ಇದರ ಹಿಂದೆ ನಡೆಯುವ ಲಕ್ಷಾಂತರ ರೂ. ವಹಿವಾಟಿನ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಇದೆ. ಆಗಾಗ ದಾಳಿ ನಡೆಸುವ ಶಾಸ್ತ್ರ ಮಾಡಲಾಗುತ್ತದೆ.
ವಿಶೇಷ ಘಟಕ ನಿಂತೇ ಹೋಯ್ತು: ೨೦೦೭ರಲ್ಲಿ ಪೊಲೀಸ್ ಆಯುಕ್ತರಾಗಿ ಬಂದ ಡಾ.ಪಿ. ರವೀಂದ್ರನಾಥ್ ಈ ಹೈಟೆಕ್ ವೇಶ್ಯಾವಾಟಿಕೆಯ ಮೇಲೆ ನಿಯಂತ್ರಣ ಹಾಕಲು ವಿಶೇಷ ಪಡೆಯನ್ನು ರಚಿಸಿದರು.  ಇದಕ್ಕೆ ಇನ್ಸ್ ಪೆಕ್ಟರ್ ದರ್ಜೆ ಅಧಿಕಾರಿಗೆ ಉಸ್ತುವಾರಿ ನೀಡಿದರು. ಒಬ್ಬ ಎಸ್‌ಐ ಹಾಗೂ ಕೆಲವು ಸಿಬ್ಬಂದಿಯನ್ನೂ ನಿಯೋಜಿಸಿದರು. ಈ ಪಡೆ ಕುಂಬಾರಕೊಪ್ಪಲು, ವಿಜಯನಗರ, ಕುವೆಂಪುನಗರ ಸಹಿತ ಕೆಲವು ಬಡಾವಣೆಗಳಲ್ಲಿ ದಾಳಿ ನಡೆಸಿತು. ಕೆಲ ದಿನ ವಹಿವಾಟಿಗೆ ಬ್ರೇಕ್ ಬಿದ್ದಂತೆ ಕಂಡಿತು. ಈ ಘಟಕದಿಂದ ಪೊಲೀಸರಿಗೆ ಲಾಭವಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದವು.
ಡಾ.ಪರಶಿವ ಮೂರ್ತಿ ಅವರು ಪೊಲೀಸ್ ಆಯುಕ್ತರಾಗಿ ಬರುತ್ತಿದ್ದಂತೆ ಈ ಚಟುವಟಿಕೆ ಮೇಲೆ ನಿಗಾ ವಹಿಸಿದರೂ ಘಟಕದಿಂದ ಉಪಯೋಗವಾಗದಿದ್ದಾಗ ಆಯಾ ಠಾಣೆಗಳಿಗೆ ಹೊಣೆ ನೀಡಿದ ಪರಿಣಾಮ ಘಟಕ ಒಂದೇ ವರ್ಷದಲ್ಲಿ ಇಲ್ಲವಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ