ಜೈಲಿನಲ್ಲಿ ಶೂಟ್‌ಔಟ್: ದಾರಿ ತಪ್ಪಿದ ತನಿಖೆ

*ಆರ್.ಕೃಷ್ಣ, ಮೈಸೂರು
ಕೇಂದ್ರ ಕಾರಾಗೃಹದಲ್ಲಿ ಗುಂಡಿನ ಸದ್ದು ಮೊಳಗಿದ್ದ ಪ್ರಕರಣ ದಿಕ್ಕು ತಪ್ಪಿದೆ.
ಬೆತ್ತನಗೆರೆ ಶ್ರೀನಿವಾಸ್ ಅಲಿಯಾಸ್ ಸೀನನ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದ ಪ್ರಕರಣ ವನ್ನು ದಡ ಸೇರಿಸಲು ಪೊಲೀಸ ರಿಗೆ ಇನ್ನು ಸಾಧ್ಯವಾಗಿಲ್ಲ.
ಹಳೆ ದ್ವೇಷದ ಹಿನ್ನೆಲೆ ಯಲ್ಲಿ ಬೆತ್ತನಗೆರೆ ಸೀನನ ಮೇಲೆ ಆತನ ದಾಯಾದಿ ಗಳಿಂದ ಸುಫಾರಿ ಪಡೆದ ಬಾಲಾಜಿರಾವ್ ಅಲಿ ಯಾಸ್ ಟಿಬೆಟ್ ಕಳೆದ ಮಾರ್ಚ್ ೧೦ರಂದು ಜೈಲಿನ ಆವರಣದಲ್ಲಿಯೇ ಗುಂಡು ಹಾರಿಸಿ ಗಾಯಗೊಳಿಸಿದ್ದ. ಘಟನೆ ನಡೆದು ಎರಡು ತಿಂಗಳಾದರೂ ಪ್ರಕರಣ ನಿಗೂಢವಾಗಿಯೇ ಇದೆ.
ಗುಂಡೇಟು ತಿಂದವನು, ಗುಂಡು ಹಾರಿಸಲು ಸುಫಾರಿ ಕೊಟ್ಟವರು  ಜೈಲಿನಲ್ಲಿಯೇ ಇದ್ದರೂ ಪಿಸ್ತೂಲು ಜೈಲಿನ ಒಳಗೆ ಹೇಗೆ ಹೋಯ್ತು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಭಾರತೀಯ ಸೇನೆ, ಪೊಲೀಸರು ಮಾತ್ರ ಬಳಸುವ ೦.೩೮ ಗುಂಡುಗಳ ಮಾರಾಟ ನಿಷೇಧ ಇದ್ದರೂ ಆರು ಗುಂಡುಗಳು ದುಷ್ಕೃತ್ಯಕ್ಕೆ ಬಳಕೆಯಾಗಿದ್ದು ಹೇಗೆ ಎನ್ನುವುದು ಬಯಲಾಗಿಲ್ಲ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ