ಮೈಸೂರಲ್ಲಿ ಪ್ರವಾಸಿಗರು ಎಷ್ಟು ಸೇಫ್?

ಶೀರ್ಷಿಕೆ ಸೇರಿಸಿ
ಆರ್. ಕೃಷ್ಣ ಮೈಸೂರು
ಮೈಸೂರಿಗೆ ಬರುವ ಪ್ರವಾಸಿಗರು ಎಷ್ಟು `ಸೇಫ್' ಎನ್ನುವ ಪ್ರಶ್ನೆ ಎದ್ದಿದೆ.
ದೂರದ ಊರಿನಿಂದ ಪ್ರವಾಸಿ ತಾಣದ ಸೊಬಗು ಸವಿಯಲು ಬರುವವರನ್ನು ವಂಚಿಸುವ, ಸುಲಿಗೆ ಮಾಡುವ  ಪ್ರಕರಣಗಳು ವರದಿಯಾಗುತ್ತಿವೆ.
ಇತ್ತೀಚೆಗೆ ಹೆಚ್ಚು ಹುಟ್ಟಿಕೊಳ್ಳುತ್ತಿರುವ `ನಕಲಿ ಪ್ರವಾಸಿ ಮಾರ್ಗದರ್ಶಕರು  ಕಡಿಮೆ ಬೆಲೆಯಲ್ಲಿ ಕೊಠಡಿಗಳ ಬಾಡಿಗೆ ಕೊಡಿಸುತ್ತೇವೆ ಎಂದು, ಮೋಜು ಮಸ್ತಿ ಆಸೆ ಇಟ್ಟುಕೊಂಡು ಬರುವ ವರಿಗೆ `ಕರೆವೆಣ್ಣು' ಆಮಿಷ ಒಡ್ಡಿ ಸೆಳೆಯುವುದು ಬೆಳಕಿಗೆ ಬಂದಿದೆ.
ಆಮಿಷ ಒಡ್ಡುವವರ ವಂಚನೆ ತಿಳಿಯದೆ ಜಾಲಕ್ಕೆ ಬೀಳುವ ಪ್ರವಾಸಿಗರು ಹಣ, ಒಡವೆ , ಮೊಬೈಲ್ ಕಳೆದುಕೊಂಡು ತಮ್ಮೂರಿಗೆ ಹಿಂದಿರುಗುವ ಪರಿಸ್ಥಿತಿ ಇದೆ. `ಕರೆವೆಣ್ಣು' ಆಸೆಗೆ ಬಿದ್ದು, ನಗ-ನಗದು ಕಳೆದುಕೊಂಡವರು ಮಾನಕ್ಕೆ ಅಂಜಿ ಪೊಲೀಸರಿಗೆ ದೂರು ನೀಡದೆ ವಾಪಸಾದರೆ, ಧೈರ್‍ಯ ಮಾಡಿ ಕೆಲವರು ದೂರು ನೀಡಿದರೂ ವಂಚಕರ ಪತ್ತೆಯಾಗುತ್ತಿಲ್ಲ. ಕೆಲವು ಪ್ರಕರಣಗಳನ್ನು ಭೇದಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ