ವರುಣಾದಲ್ಲಿ ಕಾಂಚಾಣ ಝಣಝಣ !

* ಕೂಡ್ಲಿ ಗುರುರಾಜ ಮೈಸೂರು
ಕೆಲವೇ ಕೆಲವು ವರ್ಷಗಳ ಹಿಂದೆ ಆತ ಏನೂ ಅಲ್ಲ. ಇವತ್ತು ಆತ ಬಂದರೆ ಸಕ್ಕರೆಗೆ ಇರುವೆ ಮುತ್ತುವಂತೆ ಜನ ಆತನನ್ನು ಮುತ್ತಿಕೊಳ್ಳುತ್ತಾರೆ. ಮದುವೆ,  ಸಭೆ, ಸಮಾರಂಭ, ಕ್ರೀಡಾಕೂಟ ಅಂದವರಿಗೆ ಕಿಸೆಯಿಂದ ಸಾವಿರದ ನೋಟು ಎಳೆದು ಕೈಗಿಡುವುದೇ. ಈತನ ಫೋಟೋ ಇಲ್ಲದ ಫ್ಲೆಕ್ಸ್‌ಗಳನ್ನು ಹುಡುಕಬೇಕು. ಈತನಿಗೆ ಹೇಳಿದರೆ ಮುಖ್ಯಮಂತ್ರಿ ಬಳಿ ಯಾವುದೇ ಕೆಲಸ ಸಲೀಸು ಎಂಬ ಭಾವನೆ. ಈತ ಯಾರೂ ಅಂತ ಗೊತ್ತಾಯಿತಾ? ಬೇರ್‍ಯಾರೂ ಅಲ್ಲ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಸಹಾಯಕ ಕಾ.ಪು.ಸಿದ್ದಲಿಂಗಸ್ವಾಮಿ.
ಸಿದ್ದಲಿಂಗಸ್ವಾಮಿ ಇವತ್ತು ಮೈಸೂರಿನ ರಾಜಕಾರಣ ದಲ್ಲಿ  ತೀವ್ರ ಚರ್ಚಿತ ವ್ಯಕ್ತಿ. ಪ್ರತಿಪಕ್ಷದವರು ಈತನ ಕರಾಮತ್ತಿಗೆ  ದಂಗಾಗಿದ್ದಾರೆ. ಘಟಾನುಘಟಿ ರಾಜ ಕಾರಣಿಗಳೇ ಆತಂಕ ಪಟ್ಟಿದ್ದಾರೆ. ಸಾತ್ವಿಕರು ಅಸಹ್ಯಪಟ್ಟಿ ದ್ದಾರೆ. ಈತನ ಲೆಕ್ಕಾಚಾರ ಎಷ್ಟರಮಟ್ಟಿಗೆಂದರೆ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ  ವರುಣಾ ಕ್ಷೇತ್ರದಲ್ಲಿ  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ  ತೊಡೆ ತಟ್ಟಬೇಕೆಂಬ ಗುರಿ. ಆ ನಿಟ್ಟಿನಲ್ಲೇ ಈತನ ನಡೆ.
ಯಾರು ಈ ಸಿದ್ದಲಿಂಗಸ್ವಾಮಿ? ನಂಜನಗೂಡು ತಾಲೂಕು ಕಾರ್ಯದ ಸಿದ್ದಲಿಂಗಸ್ವಾಮಿ ಪ್ರಾರಂಭ ದಲ್ಲಿ ಸುತ್ತೂರು ಮಠದಲ್ಲಿ ಸಣ್ಣಪುಟ್ಟ ಚಾಕರಿ ಮಾಡಿಕೊಂಡಿದ್ದವರು. ಯಡಿಯೂರಪ್ಪ ನವರ ಕಣ್ಣಿಗೆ ಬಿದ್ದ ಮೇಲೆ ಸಿದ್ದಲಿಂಗಸ್ವಾಮಿ ಖದರ್ರೇ ಬದಲಾಯಿತು. ಯಡಿಯೂರಪ್ಪ ಬೆಳೆದಂತೆ ಈತನೂ ಬೆಳೆದ.  ಅವರ ಆಪ್ತನಾದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ