ತಮಸೋಮಾ ಜ್ಯೋತಿರ್ಗಮಯ

*ವಿಕ ಸುದ್ದಿಲೋಕ ಮೈಸೂರು
ಅಂತೂ, ಅರಮನೆ `ಧ್ವನಿ-ಬೆಳಕು'ಯೋಜನೆಯ ಮೇಲೆ ಆವರಿಸಿದ್ದ `ಕತ್ತಲು' ಸರಿದಿದೆ. ಆದರೆ, ಆರಂಭದಿಂದಲೂ ಯೋಜನೆಗೆ ಅಂಟಿಕೊಂಡಿದ್ದ ವಿವಾದ ಸಂಪೂರ್ಣ ಮರೆಗೆ ಸರಿದಂತಿಲ್ಲ.
ಎರಡು ವರ್ಷದ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಉದ್ಘಾಟನೆಯ ಭಾಗ್ಯ ಕಂಡು, ವಿವಾದದ ಕಾರಣ ಮರು ದಿನವೇ ಕತ್ತಲಿಗೆ ಸರಿದಿದ್ದ ಯೋಜನೆ, ಹೆಚ್ಚೂ ಕಡಿಮೆ ಅದೇ ಸ್ಥಿತಿಯಲ್ಲಿ ಮತ್ತೆ ಬೆಳಕಿಗೆ ಬಂದಿದೆ.
ಅರಮನೆಯ ವೈಭವ, ಆವರಣದ ಸೊಬಗನ್ನು ಮೈಸೂರಿಗೆ ಸಂಬಂಧಿಸಿದ ಪುರಾಣ, ಇತಿಹಾಸದ ಬೆಡಗಿನೊಂದಿಗೆ ೪೫ ನಿಮಿಷದಲ್ಲಿ ಶ್ರೀಮಂತ ಧ್ವನಿ,ಕಣ್ಮನ ಸೆಳೆಯುವ ಬೆಳಕಿನ ಮೂಲಕ ಕಟ್ಟಿಕೊಟ್ಟ ಪ್ರದರ್ಶನ ಮೊದಲು ನೋಡಿದವರಿಗೆ ಸಂಪೂರ್ಣ ಖುಷಿ ನೀಡಿತು. ಆದರೆ, ಹಿಂದಿನ  ಪ್ರದರ್ಶನ ವೀಕ್ಷಿಸಿದವರು ಬೇಸರವನ್ನು ಮುಖಕ್ಕೆಳೆದುಕೊಳ್ಳದೆ ಇರಲಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ