ಗಾಯಾಳು ಆನೆ ಚೇತರಿಕೆ, ಮರಳಿ ಅರಣ್ಯಕ್ಕೆ

* ವಿಕ ಸುದ್ದಿಲೋಕ ಎಚ್.ಡಿ.ಕೋಟೆ
ಮೈಸೂರು ಜಿಲ್ಲೆ  ನಾಗರಹೊಳೆ ಅಭಯಾರಣ್ಯದ ಮೇಟಿಕುಪ್ಪೆ ವನ್ಯ ಜೀವಿ ವಲಯ ವ್ಯಾಪ್ತಿಯ ಮೇಟಿಕುಪ್ಪೆ  ಜಮೀನೊಂದರಲ್ಲಿ  ಶುಶ್ರೂಷೆ ಪಡೆಯುತ್ತಿದ್ದ  ಗಾಯಾಳು ಗಂಡಾನೆ ಚೇತರಿಸಿಕೊಂಡು ಗುರುವಾರ ಮಧ್ಯಾಹ್ನ ಕಾಡು ಸೇರಿತು.
ಬಸವರಾಜಪ್ಪ ಎಂಬುವವರ ಜಮೀನಿನಲ್ಲಿ ಬುಧವಾರ ದಿಂದಲೂ ತೀವ್ರ ಗಾಯಗೊಂಡು ಗಂಡಾನೆ ನರಳುತ್ತಿತ್ತು.
ಬಳ್ಳೆ ಕ್ಯಾಂಪ್‌ನಿಂದ ತರಲಾದ ಸಾಕಾನೆ ಅರ್ಜುನ  ಮಾವುತರಾದ ಮಾಸ್ತಿ ಮತ್ತು ಮಹದೇವನ ಸೂಚನೆ ಯಂತೆ ಮೇಲೇಳಲಾಗದೆ  ಬಿದ್ದಿದ್ದ ಆನೆಯನ್ನು ತನ್ನ  ಸೊಂಡಿಲು ಮತ್ತು ಕೊಂಬುಗಳಿಂದ ಉಪಯೋಗಿಸಿ ಎತ್ತಿ ನಿಲ್ಲಿಸಿತು. ಘೀಳಿಡುತ್ತ  ೪-೫ ನಿಮಿಷಗಳ ಕಾಲ ಸ್ಥಳದಲ್ಲೇ ನಿಂತ ಆನೆ ನಂತರ ನಿಧಾನವಾಗಿ ನಡೆದಾಡಲು ಶುರುಮಾಡಿತು. ಅರ್ಜುನ ಆನೆ, ಮಾವುತರು, ಮೇಟಿಕುಪ್ಪೆ ವನ್ಯಜೀವಿ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ ಸಂತೋಷ್ ನಾಯಕ್ ಮತ್ತು ಸಿಬ್ಬಂದಿ, ಅರಣ್ಯ ಸಂಚಾರಿ ದಳದ ಪೇದೆಗಳಾದ ಶಿವನಂಜಪ್ಪ, ಅಚ್ಯುತ್ ಮತ್ತು ಇತರರು ಆನೆಯನ್ನು ಹಿಂಬಾಲಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ